Thursday, September 16, 2010

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ

ಬೀಸಿದಲ್ಲದೆ ಬೂದಿಕವಿದ ಕಿಡಿಯುರಿದೀತೆ |
ಕೈಸೋಕದಿರೆ ಕೈಯ ಸಪ್ಪುಳಾದೀತೆ? ||
ವಾಸನೆಯೆ ಮಾತೆಯಾಶೆಗೆ ಪಿತನು ಸಂದರ್ಭ |
ದೋಷವೊಳಗೋ ಹೊರಗೊ? - ಮಂಕುತಿಮ್ಮ ||

ಸ್ನೇಹಿತರೆ ನಮ್ಮ ನಮ್ಮ ತಪ್ಪು ಒಪ್ಪುಗಳು ಹಾಗು ದೋಷಗಳು ನಮ್ಮ ಅಂತರಂಗದಲ್ಲಿಯೋ ಅಥವ ಬಹಿರಂಗದಲ್ಲೋ ಉಂಟಾಗೋದು? ಗಾಳಿ ಬೀಸದೆಯೆ ಕವಿದ ಬೂದಿಯು ಹಾರಿ ಕಿಡಿ ಉರಿಯಬಹುದಲ್ಲವೆ? ಅಂತೆಯೇ ಎರಡೂ ಕೈ ಸೇರದೆ ಚಪ್ಪಾಳೆ ಅಗಬಲ್ಲದೆ? ಆಸೆಯು ತಂದೆಯಂತೆ ಮತ್ತು ವಾಸನೆ (ಪರಿಮಳ) ತಾಯಿಯಂತೆ.. ಒಟ್ಟಿನಲ್ಲಿ ಒಳಗೋ ಹೊರಗೋ.. ಆ ವಿಧಾತನ ನಡೆಸಿದಂಗಲ್ಲವೆ? ಸ್ನೇಹಿತರೆ ಶುಭದಿನ ಶುಭೋದಯ ಮತ್ತು ವಿಶೇಷವಾಗಿ ಶುಭವಾರಾಂತ್ಯ

ಸೌಂದರ್ಯದೊಳ್ ಸ್ವಂದ ; ಬಾಂಧವ್ಯದೊಳ್ ದ್ವಂದ

ಸೌಂದರ್ಯದೊಳ್ ಸ್ವಂದ ; ಬಾಂಧವ್ಯದೊಳ್ ದ್ವಂದ |
ದ್ವಂದ್ವವೀ ಲೋಕ ಸಹವಾಸಗಳೊಳೆಲ್ಲ ||
ಮುಂದೆ ನೀನಾವುಭಯಗಳ ದಾಟಿ ಸಾಗುತಿರೆ |
ಬಂಧ ಮೋಚನ ನಿನಗೆ - ಮಂಕುತಿಮ್ಮ ||

ನಾವು ಕಾಣುವ ಸೌಂದರ್ಯದಲಿ ದ್ವಂದ, ನಮ್ಮ ಬಾಂಧವ್ಯದಲ್ಲಿ ದ್ವಂದ..... ಒಮ್ಮೊಮ್ಮೆ ನಮ್ಮ ಸ್ನೇಹತ್ವದಲ್ಲಿಯೂ ದ್ವಂದವಾಗಿಬಿಡುತ್ತದೆ.. ನಿಧಾನವಾಗಿ ಯೋಚಿಸಿ,,, ಹೌದೋ ಅಲ್ಲವೋ? ಒಟ್ಟಿನಲ್ಲಿ ಈ ಪ್ರಪಂಚದ ಸಹವಾಸಗಳೆಲ್ಲವೂ ದ್ವಂದ. ಇಂತಹ ಇಬ್ಬಂದಿತನಗಳೆಲ್ಲವನ್ನೂ ದಾಟಿ ಮುಂದೆ ಸಾಗಿದರೆ ನಮಗೆ ಈ ವ್ಯಾಮೋಹ ಬಂಧನದಿಂದ ಬಿಡುಗಡೆ.. ಅಷ್ಟು ಇಂದ್ರಿಯಗಳೆಲ್ಲವನ್ನೂ ಗೆಲ್ಲಬಲ್ಲವೆ? ಗೆದ್ದು ಮುಂದೆ ಸಾಗಿರೆಂದು ತಿಮ್ಮಿ/ತಿಮ್ಮಂದಿರರಿಗೆ ಹಾರೈಸುತ್ತಾ ಎಂದಿನಂತೆ ಪ್ರೀತಿಯ ಶುಭದಿನ ಶುಭೋದಯ

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯೆ?

ಕುಸುಮಕೋಮಲಗಾತ್ರ ಶೂರ್ಪಣಖಿಗರಿದಾಯೆ? |
ವಿಷದ ಪೂತನಿ ನಯನಪಕ್ಷ್ಮದೊಳಗಿರಳೆ? ||
ಮುಸಿನಗುವಿನೊಳಗಿರಲಶಕ್ಯವೆ ಪಿಶಾಚಿಕೆಗೆ? |
ಮೃಷೆಯೊ ಮೈಬೆಡಗೆಲ್ಲ - ಮಂಕುತಿಮ್ಮ ||

ಹೂವಿಗಿಂತ ಸುಕೋಮಲವಾಗಿರುವಂತಹುದು ಏನು ಸ್ನೇಹಿತರೆ?? ನಿಜ ಹೇಳಿ?? ನಾ ಹೇಳಲೆ? ಅದುವೇ "ಹೆಣ್ಣು" ಹೌದು, ಹೆಣ್ಣು ಕೋಮಲಾಂಗಿ, ಅಕೆಯ ಮೈಮಾಟ ವರ್ಣಿಸದಳ.. ಆಕೆಯನ್ನು ಪ್ರಕೃತಿಗೆ ಹೋಲಿಸಲಾಗುತ್ತದೆ. ಸುಂದರಿ, ವಯ್ಯಾರಿ.. ಇಡೀ ಜಗತ್ತೆ ಅಕೆಯ ಸೌಂದರ್ಯಕ್ಕೆ ಮರುಳಾಗಿ ಹೋಗಿದೆಯಲ್ಲವೆ? ಇನ್ನು ನೀವೆಲ್ಲಿ? ನಾನೆಲ್ಲಿ ಅವಳ ಸೌಂದರ್ಯಕ್ಕೆ ಸೋಲದಿರುವ ಧೀರರು ವೀರರು ಯಾರಿದ್ದಾರೆ? ಆದರೆ ಹೆಣ್ಣು ಸುಂದರವಾಗಿದ್ದರೆ ಸಾಕೆ? ಆಕೆಯ ಮನಸ್ಸು, ಬುದ್ದಿ, ವಿವೇಕ ಸಹ ಮೇಲೆ ಹೇಳಿದ ಸೌಂದರ್ಯದಷ್ಟೆ ಇದ್ದರೆ ನಿಜಕ್ಕೂ ಹೆಣ್ಣು ಅದ್ಬುತ.. ಆಕೆಯ ಸಾಮೀಪ್ಯ ಮನೋಲ್ಲಾಸ ನೀಡುತ್ತದೆ. ಅದುಬಿಟ್ಟು ಶೂರ್ಪಣಕಿ ಇಂತಹ ಮೈಮಾಟಗಳಿದ್ದರೂ, ಸುಂದರಿಯಾಗಿದ್ದರೂ ಕೆಟ್ಟಮನಸ್ಸಿನವಳಾಗಿದ್ದರಿಂದ ರಾಮನಿಂದ ಅವಳಿಗೆ ಲಾಭವಾಗಲಿಲ್ಲ.. ಹೆಣ್ಣಿನ ಕಣ್ಣುಗಳು ಮೀನಿಗೆ ಹೋಲಿಸುತ್ತೇವೆ. ಆದರೆ ಅಷ್ಟು ಸುಂದರವಾದ ಕಣ್ಣುಗಳ ಕೆಟ್ಟ ನೋಟದಿಂದಲೇ ಶೂರ್ಪಣಕಿ , ಪೂತನಿ ಕೆಟ್ಟರಲ್ಲವೆ?
ಆದರೆ ನನಗೆ ತಿಳಿದ ತಿಮ್ಮಿಯರು ಅಲ್ಲಲ್ಲ ನನ್ನ ಅಂತರ್ಜಾಲದ ಅರ್ಕುಟ್ ಸುಂದರಿಯರು ಮೈಮಾಟವಷ್ಟೆ ಅಲ್ಲದೆ ಕಣ್ಣೋಟ ಹಾಗು ಮನಸ್ಸು ಸಹ ಹಾಲಿನಂತೆ ಶುಭ್ರವಾಗಿದೆಯೆಂದು ನಾನು ಬಲ್ಲೆ ಹೌದಲ್ಲವೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ -

ಮರುಕದುಂಬಿದ ಕಣ್ಣನೋಟದೊಳಗಿದ್ದೀತು

ಮರುಕದುಂಬಿದ ಕಣ್ಣನೋಟದೊಳಗಿದ್ದೀತು |
ಬಿರುನುಡೀಯೊಳಿರದೊಂದು ಕೊರಲಗು, ಸಖನೆ ||
ಕರವಾಳಕದಿರದಿಹ ದುರಿತಕಾಯ ಹೃದಯ |
ಕರುಣಿಯಿಂ ಕರಗಿತೊ - ಮಂಕುತಿಮ್ಮ ||

ಅಯ್ಯಾ ಸ್ನೇಹಿತರೆ, ಬಿರುನುಡಿಯಲ್ಲಿ ನಮ್ಮಯ ಕಣ್ಣಿಗೆ ಕಾಣದ ಕಠೋರತೆ ಒಮ್ಮೊಮ್ಮೆ ಕಣ್ಣುಗಳಲ್ಲಿ ಕಂಡುಬರುತ್ತದೆ. ಕಡುಪಾಪಿಯ ಹೃದಯ ಕತ್ತಿಗೆ ಅಂಜದಿರಬಹುದು.. ಆದರೆ ಕರುಣೆಯಿಂದ ಕರಗಬಲ್ಲದೆಂದು ನೆನಪಿಡಿ. ಕರುಣೆ ಇರಲಿ ಮಿತ್ರರೆ.. ಆದರೆ ಮೋಸಹೋಗುವಷ್ಟು ಇರದಿರಲಿ, ಕೇವಲ ಕರುಣೆಯೊಂದೇ ಇದ್ದರೂ ಸಾಲದು.. ಅದರ ಜೊತೆಗೆ ಜಾಣ್ಮೆಯು ಇರಲಿ.. ಜಗತ್ತಿನಲ್ಲಿ ಪ್ರೀತಿ - ಕರುಣೆಯ ಮುಂದೆ ಇನ್ನಾವ ಅಸ್ತ್ರಗಳು ಮನುಷ್ಯನನ್ನು ಬಗ್ಗಿಸಲಾರದು. ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯು ಶುಭನುಡಿ - ಶುಭದಿನ ಶುಭೋದಯ

ಇರುವನ್ನಮೀ ಬಾಳು ದಿಟವದರ ವಿವರಣೆಯ

ಇರುವನ್ನಮೀ ಬಾಳು ದಿಟವದರ ವಿವರಣೆಯ |
ಹೊರೆ ನಮ್ಮ ಮೇಲಿಲ್ಲ ನಾದವರ ಸಿರಿಯ ||
ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುವುದೆ |
ಪುರುಷಾರ್ಥಸಾಧನೆಯೊ - ಮಂಕುತಿಮ್ಮ ||

ಸ್ನೇಹಿತರೆ ನಾವುಗಳು ಬದುಕಿರೋ ತನಕ ನಮ್ಮಯ ಬಾಳರಿವುದು ಸತ್ಯವಲ್ಲವೆ? ಅದರ ವಿವರಣೆಯ ಭಾರವು ನಮ್ಮ ಹೆಗಲಮೇಲಿರುವುದಿಲ್ಲ.. ಆದರೆ ನಮ್ಮ ಬಾಳಸಿರಿಯನ್ನು ಭವ್ಯವಾಗಿ ನಡೆಸಲು ಚತುರತೆಯಿಂದ ಕೆಲಸ ಮಾಡಬೇಕು. ಅದೇ ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಾಧನೆಯಾಗಿದೆ. ನೀವುಗಳು ಜಾಣರು... ಜಾಣ್ಮೆಯಿಂದಲೇ ಕೆಲಸ ಮಾಡುತ್ತೀರೆಂದು ನಾ ಬಲ್ಲೆ ಎಂದಿನಂತೆ ನಿಮ್ಮೀ ಸ್ನೇಹಿತನಾದ ರವಿಯ ಶುಭದಿನ ಶುಭೋದಯ.

ಇರುವನ್ನಮೀ ಬಾಳು ದಿಟವದರ ವಿವರಣೆಯ

ಇರುವನ್ನಮೀ ಬಾಳು ದಿಟವದರ ವಿವರಣೆಯ |
ಹೊರೆ ನಮ್ಮ ಮೇಲಿಲ್ಲ ನಾದವರ ಸಿರಿಯ ||
ಪಿರಿದಾಗಿಸಲು ನಿಂತು ಯುಕ್ತಿಯಿಂ ದುಡಿಯುವುವುದೆ |
ಪುರುಷಾರ್ಥಸಾಧನೆಯೊ - ಮಂಕುತಿಮ್ಮ ||

ಸ್ನೇಹಿತರೆ ನಾವುಗಳು ಬದುಕಿರೋ ತನಕ ನಮ್ಮಯ ಬಾಳರಿವುದು ಸತ್ಯವಲ್ಲವೆ? ಅದರ ವಿವರಣೆಯ ಭಾರವು ನಮ್ಮ ಹೆಗಲಮೇಲಿರುವುದಿಲ್ಲ.. ಆದರೆ ನಮ್ಮ ಬಾಳಸಿರಿಯನ್ನು ಭವ್ಯವಾಗಿ ನಡೆಸಲು ಚತುರತೆಯಿಂದ ಕೆಲಸ ಮಾಡಬೇಕು. ಅದೇ ಧರ್ಮ, ಅರ್ಥ, ಕಾಮ, ಮೋಕ್ಷಗಳ ಸಾಧನೆಯಾಗಿದೆ. ನೀವುಗಳು ಜಾಣರು... ಜಾಣ್ಮೆಯಿಂದಲೇ ಕೆಲಸ ಮಾಡುತ್ತೀರೆಂದು ನಾ ಬಲ್ಲೆ ಎಂದಿನಂತೆ ನಿಮ್ಮೀ ಸ್ನೇಹಿತನಾದ ರವಿಯ ಶುಭದಿನ ಶುಭೋದಯ.

Saturday, September 11, 2010

ಗಾರೆಹಚ್ಚೇನಿಲ್ಲ ದಾರು ದೂಲಗಳಲ್ಲ

ಗಾರೆಹಚ್ಚೇನಿಲ್ಲ ದಾರು ದೂಲಗಳಲ್ಲ |
ಪಾರದ ದ್ರವದವೊಲು ಮನುಜಸ್ವಭಾವ ||
ವೀರಶಪತಗಳಿಂದ ಘನರೂಪಿಯಾಗದದು |
ಸೈರಿಸನಿನಿತು ನೀಂ ಮಂಕುತಿಮ್ಮ ||

ಮನುಷ್ಯನ ನಡವಳಿಕೆ ಅಥವ ಅವನ ಸ್ವಭಾವ ಸಿಮೆಂಟ್ ಗಾರೆಯಂಥಹ ಒಂದೇ ಸಮವೇನಿರುವುದಿಲ್ಲ. ಅಂತೆಯೇ ಮರದ ತೊಲೆಯಂತೆಯೂ ಇರುವುದಿಲ್ಲ. ನಮ್ಮ ನಮ್ಮ ಸ್ವಭಾವ ಪಾದರಸದಂತೆ ಹರಿದಾದುವ ಚಂಚಲತೆಯಿಂದ ಕೂಡಿರುವಂಥದ್ದು. ಯಾವುದೇ ಕಾರಣಕ್ಕೂ ಅಣೆ ಪ್ರಮಾಣದಿಂದ ನಿಲ್ಲಿಸೋಕೂ ಆಗುವುದಿಲ್ಲ. ಬಂದದ್ದೆಲ್ಲಾ ಛಲದಿಂದ ಎದುರಿಸಿ ಸೈರಿಸಲೇ ಬೇಕು. ಅಂತಹ ಛಲ, ಧೈರ್ಯ ವಿಘ್ನವಿನಾಶಕನಾದ ನಮ್ಮ ಗಣಪತಿಯು ನೀಡಲಿ, ಅಗ್ರಗಣ್ಯಪೂಜಿತನೆಂದು ಪ್ರಸಿದ್ದಿ ಪಡೆದ ವಿನಾಯಕನು ತಮ್ಮ ಇಷ್ಟಾರ್ಥ ನೇರವೇರಿಸಲಿ, ಸಕಲ ವಿಘ್ನಗಳನ್ನೂ ನಿವಾರಿಸಲೆಂದು ಪ್ರಾಥನೆ ಮಾಡಿಕೊಳ್ಳುತ್ತಾ ಗಣೇಶನ ಹಬ್ಬದ ಶುಭದಿನದಂದು, ಅರ್ಕುಟ್‌ನ ಸ್ನೇಹಿತರೂ, ಗುರುಸಮಾನರಾದ ಶ್ರೀ ಶ್ರೀನಿವಾಸರ ಆಶೀರ್ವಾದದೊಂದಿಗೆ ಜಗನ್ಮಾತೆಯ "ಸೌಂದರ್ಯಲಹರಿ" ಶ್ರೀ ಶಂಕರಾಚಾರ್ಯರು ಬರೆದ ಸೋತ್ರ ಹಾಗು ಅರ್ಥವನ್ನು ಈ ಕೆಳಗೆ ಹೇಳಿದ ಸಮುದಾಯದಲ್ಲಿ ಇಂದಿನಿಂದ ಪ್ರಾರಂಭಿಸುತ್ತೇನೆ. ತಾಯಿ ಮಂಗಳಸ್ವರೂಪಿನಿಯಾದ ಶ್ರೀಗೌರಿಯ ಕೃಪಕಟಾಕ್ಷ ಸಿದ್ದಿಸಿ, ಗಣಪತಿಯ ಆಶೀರ್ವಾದ ಲಭಿಸಲಿ. ಗೌರಿ-ಹಣೇಶ ಹಬ್ಬದ ಶುಭಾಶಯಗಳು ನನ್ನ ಸನ್ಮಿತ್ರರಿಗೆhttp://www.orkut.co.in/Main#CommMsgs?cmm=94754291&tid=5502869896806510227
ಆಸಕ್ತಿಯುಳ್ಳವರು ಓದಿದರೆ ಹೇಳಿದ ಪುಣ್ಯ ನನಗೆ, ಓದಿದ ಪುಣ್ಯ ನಿಮಗೆ

Wednesday, September 8, 2010

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ

ಸಾಕುಸಾಕೆನಿಸುವುದು ಲೋಕಸಂಪರ್ಕಸುಖ |
ಸೋಕಿದೆಡೆ ತುರಿಯನೆಬ್ಬಿಸುವ ತುರುಚಿಯದು ||
ಮೋಕನವೆ ತುರಿಸದೆ, ತುರಿಯುತಿರೆ ಹಣ್ಣುರಿತ |
ಮೂಕನಪಹಾಸ್ಯವದು - ಮಂಕುತಿಮ್ಮ ||

ನಮಗೆ ಒಮ್ಮೊಮ್ಮೆ ಈ ಪ್ರಪಂಚದ ಸಂಬಂಧಗಳು ಸಾಕಪ್ಪ ಸಾಕು ಅಂತ ಅನಿಸಿಬಿಡುತ್ತವೆ. ಸೋಕಿದರೆ ಮಾತ್ರ ಮತ್ತಷ್ಟು ಅಂಟಿಕೊಳ್ಳುವ, ಕೆರೆದರೆ ಮತ್ತಷ್ಟು ಕೆರೆದುಕೊಳ್ಳುವಂತೆ, ತುರಿಯಷ್ಟೂ ರುಚಿಯಾಗಿರುತ್ತದೆ. ಕೆರೆಯದಿದ್ದರೆ ಏನೋ ಮೂಕನವೆ, ಕೆರೆಯುತ್ತಿದ್ದರೆ ಗಾಯದ ಉರಿ... ಅಂತೆಯೇ ಗೆಳೆತನ, ಪ್ರೇಮ, ಪ್ರೀತಿಯ ಅನುಬಂಧಗಳು ಇವೆಲ್ಲವೂ ಹಾಗೆಯೇ ಇರುತ್ತದೆಯಲ್ಲವೆ? ಹತ್ತಿರವಾದರೆ ಮತ್ತೂ ಹತ್ತಿರ, ಇಲ್ಲವೆ ದೂರ ದೂರ... ಅಯ್ಯೋ ಇದು ಮೂಕ ಅಪಹಾಸ್ಯವಲ್ಲದೆ ನಮ್ಮಯ ಬದುಕು? ಈ ಮೂಕಾಪಹಾಸ್ಯದಲ್ಲಿ ನನ್ನ ಪಾತ್ರವೇನೆಂದರೆ ನಿಮಗೆ ದಿನವೂ ಕಗ್ಗದ ರೂಪದಲ್ಲಿ ಶುಭದಿನ ಶುಭೋದಯ ಹೇಳೋದು

ಧ್ವನಿತ ಪ್ರತಿಧ್ವನಿತ ಮನುಜ ಜೀವಿತವೆಲ್ಲಾ

ಧ್ವನಿತ ಪ್ರತಿಧ್ವನಿತ ಮನುಜ ಜೀವಿತವೆಲ್ಲಾ
ಕುಣಿವುದವನೆದೆ ಜಗತ್‌ಪ್ರಕೃತಿ ಪಾಡುವವೊಲ್
ಇನಿದಕೊಲವಳಲಿಗನುತಾಪ ; ಸೆಣಸಿಗೆ ಬಿಸಿರ
ಘನಗರ್ಜಿತಕೆ ದೈನ್ಯ - ಮಂಕುತಿಮ್ಮ

ನಮ್ಮಯ ಜೀವನವೆಲ್ಲಾ ಬರೀ ಗದ್ದಲ, ಪ್ರತಿಗದ್ದಲ, ಕೂಗು - ಪ್ರತಿಕೂಗುವಿಕೆಯಿಂದ ತುಂಬಿಹೋಗಿದೆ. ನಮ್ಮಯ ಹೃದಯದಲ್ಲಿ ಈ ಪ್ರಪಂಚದ ಪ್ರಕೃತಿ ಹಾಡುವಂತೆ ಕುಣಿಯುತ್ತ ಇರುತ್ತದೆ. ಪ್ರಿಯತಮೆಯ ಪೀತಿ, ಪ್ರಿಯತಮನ ಅಕ್ಕರೆ, ದುಗುಡ, ಅನುತಾಪ ಇವೆಕ್ಕೆ ಏನೂ ಕೊರತೆಯಿರುವುದಿಲ್ಲ ಇವೆರೆಡರ ಮಧ್ಯ ಜೀವನದ ಹೋರಾಟ, ಆರ್ಭಟಕ್ಕೆ ಎಣೆಯೇ ಇಲ್ಲ.. ಇದುವೆ ಅಲ್ಲವೆ ನಮ್ಮಯ ಸುಂದರ ಜೀವನ ತಿಮ್ಮ/ತಿಮ್ಮಿಯರೆ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

Tuesday, September 7, 2010

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ |

ಮಾನುಷದ ಚರಿತೆ ಪರಸತ್ತ್ವಸಾಕ್ಷಾತ್ಕವಿತೆ
ಕಾಣಿಪುದದಾತ್ಮಸ್ವಭಾವದುದ್ಗಮವ
ಏನಾಶೆ! ಯೇನ ಸಾಹಸ! ವೇನು ಭಂಗಿಗಳು
ಅನುಭವವೇದವದು - ಮಂಕುತಿಮ್ಮ

ಈ ಮಾನವನ ಚರಿತ್ರೆ ಹೇಗಿದೆಯೆಂದರೆ, ಪರಸತ್ಯ ತುಂಬಿದ ಸಾಕ್ಷಾತ್ ಕವಿತೆಯಿದ್ದಂತೆ. ಅದು ಆತ್ಮನ ಸ್ವಭಾವವದ ಉಗಮವನ್ನು ತೋರಿಸಿಕೊಡುತ್ತದೆ. ಅಬ್ಬಬ್ಬಾ.. ಎಂತೆಂತಹ ಸಾಹಸ, ಕ್ರೀಡೆಗಳು, ಆಸೆಗಳು, ಆ ಒನಪು ವಯ್ಯಾರಗಳು, ಆಸೆ ಆಕಾಂಕ್ಷೆಗಳು... ಆ ಭಾವ ಭಂಗಿಗಳು ಓಹ್ ಅನುಭವದ ವೇದವೇ ಆಗಿರುತ್ತದೆಯಲ್ಲವೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ
ಕುಣಿಕೆಯನ್ನು ನಿನ್ನ ಕೊರಳಿಗೆ ಹೂಡಿ ಚಿರಕಾಲ
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ

ಸ್ನೇಹಿತರೆ ಆ ಯಮಪಾಶವು ನಮ್ಮನ್ನು ಒಂದೇ ಕ್ಷಣದಲ್ಲಿ ನಮ್ಮೀ ಜೀವಾತ್ಮಕ್ಕೆ ಮುಕ್ತಿ ಕೊಟ್ಟುಬಿಡುತ್ತದೆ. ಆದರೆ ಮೋಹ ಮಮತೆಯೆಂಬ ಪಾಶ????? ಈ ಮೋಹ ಪಾಶ ನಮ್ಮನ್ನು ಅಣುಅಣುವಾಗಿ ಕೊಲ್ಲುತ್ತಲೇ ಇರುತ್ತದೆ ನೋಡಿ. ನಾವು ಎಷ್ಟು ಬೇಡ ಬೇಡವೆಂದರೂ ಅದರ ಕುಣಿಕೆಗೆ ನಮಗೆ ಅರಿವಿಲ್ಲದಂತೆ ಸಿಕ್ಕುಬಿಟ್ಟಿರುತ್ತೇವೆ. ನಮ್ಮೀ ದೇಹದಲ್ಲಿ "ಜೀವಾತ್ಮ" ಇರುವವರೆಗೂ ಮೋಹ ಪಾಶದಲ್ಲಿ ಸಿಕ್ಕು ಕ್ಷಣಕ್ಷಣಕ್ಕೂ ಅದರ ಹಿಡಿತದಿಂದ ನರಳಾಡುತ್ತಲೇ ಇರುತ್ತೇವಲ್ಲವೆ? ಅಂತಹ ಮೋಹಪಾಶದ ಹಿಡಿತದಿಂದ ನಮ್ಮ ತಿಮ್ಮ/ತಿಮ್ಮಿಯರಿಗೆ ಶೇಕಡಾ ತೊಂಬತ್ತರಷ್ಟು ಆನಂದ, ಸಂತೋಷ ಲಭಿಸಲೆಂದು ಆಶಿಸುತ್ತಾ, ಎಂದಿನಂತೆ ನಿಮ್ಮ ಸ್ನೇಹಿತನ ರವಿಯ ಶುಭನುಡಿ - ಶುಭದಿನ ಶುಭೋದಯ

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ
ಯಕ್ಷಿಯರು ಮ್ಯಾಕ್‌ಬೆತನಿಗೆಸಗಿದುಪದೇಶ
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು?
ಅಕ್ಷಿ ನಿರ್ಮಲವೇನೊ ? - ಮಂಕುತಿಮ್ಮ

ನಮ್ಮೀ ಮನಕೆ ಆಸೆಗಳನ್ನು ಉಂಟುಮಾಡುವ ಬಂಧು - ಮಿತ್ರರ ಉಪಕಾರವು ಎಷ್ಟೆಂದರೆ.... ಮಾಟಗಾತಿ ಮ್ಯಾಕ್‌ಬೆತ್‌ನಿಗೆ ಮಾಡಿದ ಉಪಕಾರವಿದ್ದಂತೆ ಎಂದರೆ ತಪ್ಪಾಗಲಾರದು. ಇತ್ತ ನಿರ್ಮಲ ಪ್ರೀತಿ- ವಾತ್ಸಲ್ಯವೂ ಇಲ್ಲದೆ ಅತ್ತ ಕೋಪ-ತಾಪವೂ ಇಲ್ಲದೆ ಸಂಶಯದ ನೋಟದಲೇ ಜೀವನ ಪರ್ಯಂತ ಕಳೆದುಬಿಡುತ್ತೇವೋ ಏನೋ... ಒಟ್ಟಿನಲ್ಲಿ ಕಣ್ಣನೋಟ ನಿರ್ಮಲವಿರಬೇಕಷ್ಟೆ.... ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ.. ತಾಯಿ ಮಹಾಲಕ್ಷಿಯ ಕೃಪಕಟಾಕ್ಷ ಲಭಿಸಲಿ.. ಲಭಿಸಿದ ಮೇಲೆ ಈ ಬಡಪಾಯಿಯ ನೆನಪೂ ಇರಲೆಂದು ಹಾರೈಸುತ್ತಾ ರೈಟ್ ಹೇಳ್ತಾ ಇದ್ದೀನಿ

ಬಿತ್ತ ಮಳೆಗಳವೋಲು ಯತ್ನ ಸೈವಿಕ ನಮಗೆ
ಯುಕ್ತದೊಳಗೆರಡುಮನುವಾಗೆ ಬೆಳೆ ಹುಲುಸು
ಯತ್ನ ಬಿಟ್ಟರೆ ಲೋಪ, ದೈವ ತಾಂ ಬಿಡೆ ತಾಪ
ಗೊತ್ತಿಲ್ಲ ಫಲದ ಬಗೆ - ಮಂಕುತಿಮ್ಮ

ಹದವಾದ ಮಳೆ ಮತ್ತು ಒಳ್ಳೇಯ ಬೀಜ ಇದ್ದರೆ ಬೆಳೆ ಎಷ್ಟು ಹಸನಾಗಿ ಬರುವುದಲ್ಲವೆ? ಹಾಗೆಯೇ ನಮ್ಮ ಪ್ರಯತ್ನ ಮತ್ತು ದೈವಕೃಪೆ ಇದ್ದಲ್ಲಿ ಜಯಭೇರಿ.... ನಮ್ಮ ಪ್ರಯತ್ನ ನಿಂತರೂ ಹಾನಿ ಜೊತೆಗೆ ದೈವಕೃಪೆ ತಪ್ಪಿದರೂ ತಾಪ. ಒಟ್ಟಿನಲ್ಲಿ ಫಲವೇನೆಂದು ತಿಳಿಯೋಲ್ಲ ನೋಡೀ ಸ್ನೇಹಿತರೆ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ - ಶುಭದಿನ ಶುಭೋದಯ

ಮೂರಿರಲಿವಾದ, ಮುನ್ನೂರಿರಲಿ : ಸಕಲರುಂ
ಸಾರವಸ್ತುವನೊಂದನೊಪ್ಪಿಕೊಳುವರೇ
ಪಾರಮಾರ್ಥಿಕವನಂತೆಣಿಸಿದ ವ್ಯವಹಾರ
ಭಾರವಾಗದು ಜಗಕೆ - ಮಂಕುತಿಮ್ಮ

ನಾಸ್ತಿಕನಾಗಲಿ ಇಲ್ಲವೇ ಅಸ್ತಿಕನಾಗಲಿ, ವಾದ - ವಾಗ್ವಾದಗಳು ಮೂರಿರಲಿ ಯಾ ಮುನ್ನೂರಿರಲಿ, ಎಲ್ಲರೂ ಭಗವಂತನ ಇರುವಿಕೆಯನ್ನು ಒಪ್ಪಿಕೊಂಡಿದ್ದಾರೆ. ಈ ಜಗದಲಿ ಏನೇ ಆಗಲಿ, ಅದು ನಮ್ಮ ಎಣಿಕೆಯಂತೆ ಆಗದಿರಬಹುದು. ಎಲ್ಲವೂ ಆತನ ಸಂಕಲ್ಪದಂತೆಯೇ ಜರುಗುತ್ತದೆ. ಅಂದಮೇಲೆ ವೃಥಾ ಕೊರಗದೆ, ಇನ್ನೊಬ್ಬರಿಗೆ ಕೆಡುಕುಂಟು ಮಾಡದೆ, ನಾಲ್ಕು ಜನರಿಗೆ ಉಪಕಾರವಾಗುವ ರೀತಿಯಲ್ಲಿ ಅ ಜೀವನ ಸವೆಸಿಬಿಟ್ಟರೆ ಅತನ ಅನುಗ್ರಹ ಸದಾ ಕಾಲ ನಮ್ಮ ಮೇಲಿರುವುದಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನದ ಜೊತೆಗೆ ವಿಶೇಷವಾಗಿ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

ಅಂಬುದಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ
ಬೆಂಬದೊಳಗಿಮಿತ ಸತ್ತ್ವವ ಪಿಡೀಬಿಡುವ ಭಕ್ತಿ -
ಯಿಂಬು ಕಿಂಚನ್ಮತಿಗೆ - ಮಂಕುತಿಮ್ಮ

ಮಡಕೆಯಲ್ಲಿ ಸಮುದ್ರದ ನೀರನ್ನೆಲ್ಲಾ ತುಂಬಿಕೊಳ್ಳಲು ಸಾಧ್ಯವೆ? ಅಂತೆಯೇ ನಿಮ್ಮ ಮನೆಯಂಗಳದ ಕಿಟಕಿಯ ಮುಖಾಂತರ ತೂರಿ ಬಂದ ಹೊಂಬಿಸಿಲನ್ನು ತುಂಬಿಕೊಳ್ಳಲು ಸಾಧ್ಯವೆ? ಇಡೀ ಸಂಪತ್ತಿಗೆಲ್ಲಾ ಬಡವನೊಬ್ಬನು ಒಡೆಯನಾಗುವನೇ ತಿಮ್ಮ ತಿಮ್ಮಿಯರೆ?ಭಕ್ತನಾದವನು ಬಿಂಬದಲ್ಲಿ ಅನಂತ ಸತ್ತ್ವವನು ಕಾಣುವನು. ಯಾವುದೇ ಕ್ಷೇತ್ರವಾಗಲಿ ನಾವು ನಾವು ಮಾಡುವ ಕೆಲಸಗಳ ಮೇಲೇ ಭಯ ಭಕ್ತಿ ಇದ್ದರೆ ಮಾತ್ರ ನೆರವಾಗಬಲ್ಲದೆಂದು ಈ ಕಗ್ಗದಲ್ಲಿ ತಿಳಿದುಬರುತ್ತದೆಯಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ಖದ್ಯೋತನಂತೆ ಬಿಡುಗೊಳ್ಳದೆ ಧರ್ಮದ ಚರಿಸು |

ಖದ್ಯೋತನಂತೆ ಬಿಡುಗೊಳ್ಳದೆ ಧರ್ಮದ ಚರಿಸು
ವಿದ್ಯುಲ್ಲತೆಯ ತೆರದಿ ತೇಜಗಳ ಸೂಸು
ಗೆದ್ದುದೇನೆಂದು ಕೇಳದೆ, ನಿನ್ನ ಕೈಮೀರಿ
ಸದ್ದು ಮಾಡದೆ ಮಡಗು - ಮಂಕುತಿಮ್ಮ

ಸ್ನೇಹಿತರೆ... ಬಲಗೈಲ್ಲಿ ಮಾಡಿದ ದಾನ ಎಡಗೈಗೆ ಗೊತ್ತಾಗಬಾರದು ಎಂದು ಹೇಳಿದ್ದಾರೆ ಹಿರಿಯರು... ನೋಡಿ ಸೂರ್ಯನಂತೆ ಬಿಡದೆ ಧರ್ಮವನ್ನು ಪಾಲಿಸುವಂತರಾಗಿ, ಮಿಂಚಿನ ಬಳ್ಳಿಯ ರೀತಿಯಂತೆ ಬೆಳಕನ್ನು ಚೆಲ್ಲುವಂತರಾಗಿ. ಗೆಲುವು ಆದದ್ದು ಏನೆಂದು ಕೇಳದೆ, ನೋಡದೆ ನಿಮ್ಮ ಕೈಮೀರಿ ಗದ್ದಲ ಮಾಡದೆ ಬಾಗಿ ಈ ಬಾಳಹಾದಿಯನ್ನ ಸವೆಸುವಂತರಾಗಿ.... ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಬನ್ನಬವಣೆಗಳ ತಾನೆನಿತನೆತು ಪಟ್ಟಿರೆಯು
ಮಿನ್ನೊಮ್ಮೆ ಮತ್ತೊಮ್ಮೆ ಹೊಸ ಸಾಹಸಗಳಿಂ
ಸನ್ನಹಿಸುವಂ ಸುಮ್ಮನಿರಲೊಲದೆ ಮಾನವನು
ಚಿನ್ಯಯತೆಯಾತ್ಮಗುಣ - ಮಂಕುತಿಮ್ಮ

ತನ್ನ ಬದುಕಿನಲ್ಲಿ ಮನುಷ್ಯನು ಎಷ್ಟೋ ಕಷ್ಟಕೋಟಲೆಗಳನ್ನು ಪಟ್ಟಿರುವನಲ್ಲವೆ? ಅದಾಗ್ಯೂ ಸುಮ್ಮನಿರದೆ ಹೊಸ ಹೊಸ ಸಾಹಸಗಳಿಗೆ ಕೈ ಹಾಕುತ್ತಲೇ ಇರುತ್ತಾನೆ. ಮಾನವನ ಹೃದಯದೊಳಗಿರುವ ಆತ್ಮವು ಚಿನ್ಮಯತೆಯಿಂದಿರುವುದೇ ಇದಕ್ಕೆ ಪ್ರೇರಣೆಯಾಗಿದೆಯಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ವಿವಿಧರಸಗಳ ಭಟ್ಟಿ, ಸೌಂದರ್ಯ ಕಾಮೇಷ್ಟಿ
ಕವಿಜಗತ್ಸಷ್ಟಿಯದು ಕಲೆಗಾನಾಕೃಷಿ
ಗವಿಯೊಳಗಣ ಪ್ರಕೃತಿಯಂತ್ರ ವೈಚಿತ್ರ್ಯವದು
ತಪಸೊಂದೆ ಪಥವದಕೆ - ಮಂಕುತಿಮ್ಮ

ಸೌಂದರ್ಯ ಎಂದೊಡನೆ ಮನಕ್ಕೆ ಎಷ್ಟು ಖುಶಿ ಆಗುತ್ತೆ ನೋಡಿ... ಆ ಸೌಂದರ್ಯದ ಗಮ್ಮತ್ತೇ ಹಂಗಿರುತ್ತದೆ. ಅದು ನಾನಾ ರಸಗಳ ಸಾರ.. ಕಾಮವನ್ನು ಪಡೆಯಲು ಮಾಡಿದ ಯಜ್ಞವೆಂದು "ರಸಿಕ ಮಹಾಶಯ" ರ ಅಂಬೋಣ. ಕವಿಗಳಿಗೆ ಸೌಂದರ್ಯವು ಜಗದ ಸೃಷ್ಟಿ. ಕಲಾವಿದನೊಬ್ಬ ಸೌಂದರ್ಯವನ್ನು ಎಳೆದು ತರಬಲ್ಲ ತಾಕತ್ತು ಆತನಿಗಿರುತ್ತದೆ. ಒಟ್ಟಿನಲ್ಲಿ ಸೌಂದರ್ಯದ ಈ ಅಂತರಂಗವನ್ನು ಅರಿಯಲು ಸಾಧ್ಯವೇ ಇಲ್ಲ, ಅದನ್ನು ಅರಿಯಲು ನಿಷ್ಟೆಯೆಂಬ ತಪಸ್ಸು ಮಾಡಬೇಕು. ಆಗಲೇ ಆ ಸೌಂದರ್ಯದ ವಿರಾಟ್ ದರ್ಶನ ಸಾದ್ಯ ಸ್ನೇಹಿತರೆ, ನನ್ನ ಗೆಳತಿಯರೇ... ಅತ್ಯಂತ ಕಲಾರಾಧಕರು, ಸೌಂದರ್ಯೋಪಾಸಕರು ಆದ ನಿಮಗೆನಿಮ್ಮ ಸ್ನೇಹಿತನಾದ ರವಿಯ ಪ್ರೀತಿಯ ಶುಭನುಡಿ - ಶುಭದಿನ ಶುಭೋದಯ


ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ
ಎತ್ತಲೋ ಸಖನೊರ್ವನಿಹನೆಂದು ನಂಬಿ
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು
ಭಕ್ತಿಯಂತೆಯೆ ನಮದು - ಮಂಕುತಿಮ್ಮ

ಗಮನಿಸಿ ನೋಡಿ, ಕತ್ತಲಿನಲ್ಲಿ ಏನನ್ನೋ ಕಂಡು ಬೆದರಿದ ನಾಯಿಯೊಂದು ತನ್ನ ಪಾಲಿನ ಗೆಳೆಯನೋರ್ವನು ಇದ್ದಾನೆಂದು ನಂಬಿ ಕತ್ತನ್ನು ಎತ್ತಿ ಬೊಗಳಿ ಹಾರಾಡುತ್ತದೆ.. ಇಲ್ಲಿ ಮುಖ್ಯವಾಗಿ ನಂಬಿಕೆಯ ಹುಡುಕಾಟವೇ ನಮ್ಮ ಭಕ್ತಿಯಾಗಿದೆಯಲ್ಲವೆ? ಅಂತಹ ನಂಬಿಕೆ ನಿಮ್ಮ ಜೀವನದಲ್ಲೂ ಸದಾ ಕಾಲ ಇರಲೆಂದು ಹಾರೈಸುತಾ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ - ಶುಭದಿನ ಶುಭೋದಯ

ಗೃಹದಿ ರಾಷ್ಟ್ರದಿ ಸಮಾಜದಿ ಲೋಕಸಂಗತದಿ
ವಿಹಿತದ ಸ್ಥಾನದಿಂ ಸಹಜ ಗುಣಬಳದಿಂ
ದಿಹಪರಸಮನ್ವಯದ ಸರ್ವಹಿತ ಸಂಸ್ಥಿಗೆ
ಸಹಕರಿಪುದಲೇ ಧರ್ಮ - ಮಂಕುತಿಮ್ಮ

ಯಾವುದು ಧರ್ಮ?? ಯಾವ ಧರ್ಮ ಹೆಚ್ಚು ?? ಹಿಂದು ಧರ್ಮವೇ? ಕ್ರೈಸ್ತ ಧರ್ಮವೇ? ಇಸ್ಲಾಮಿಕ್ ಧರ್ಮವೇ?? ಯಾದ ಧರ್ಮ , ಆ ದೇವನು ಮೆಚ್ಚುವ ಧರ್ಮ ಯಾವುದು ಗೊತ್ತೇ??
ಮನೆ, ರಾಷ್ಟ್ರ , ಸಮಾಜಗಳ ಹಾಗು ಲೋಕ ಕಲ್ಯಾಣಕ್ಕಾಗಿ ಅರ್ಹವಾದ ಸ್ಥಾನದಲ್ಲಿ ಇದ್ದುಕೊಂಡು ನಮ್ಮಯ ಸಹಜವಾದ ಗುಣಬಲದಿಂದ ಮತ್ತು ಇಹ - ಪರಗಳ ಸಮನ್ವಯದ ಗುಣದಿಂದ ಎಲ್ಲರ ಏಳ್ಗೆಗೆ ಸಹಕರಿಸುವುದೇ ಧರ್ಮ... ಅಲ್ಲವೇ?? ಮನಕ್ಕೆ ಕಷ್ಟವಾದರೂ ಇದುವೇ ಆ ದೇವನು ಮೆಚ್ಚುವ ಧರ್ಮ.. ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ

ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ
ಕಾಯಿಸುತ ಕರಿಯುತ ಹುರಿಯುತ ಸುಡುತ
ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ
ಬಾಯಿ ಚಪ್ಪರಿಸುವನು - ಮಂಕುತಿಮ್ಮ

ವಿಧಿಯು ನಮ್ಮನ್ನು ಈ ಭೂಮಿಯೆಂಬ ಒಲೆಯಲ್ಲಿ ನಮ್ಮಯ ಬಾಳನ್ನು ಇಟ್ಟು ಚೆನ್ನಾಗಿ ನೆನಸುತ್ತಾ, ಬೇಯಿಸುತ್ತಾ ಇದೆ. ಅಷ್ಟಕ್ಕೆ ಅದು ತೃಪ್ತನಾಗದೆ ಸಮಯ ನೋಡಿಕೊಂಡೂ ನಮ್ಮನ್ನು ಕೊಚ್ಚುತ್ತಲೂ, ಕಾಯಿಸುತ್ತಲೂ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೆಲವೊಂದು ಕಡೆ ಬಾಣಲೆಯಲ್ಲಿ ಕುದಿವ ಎಣ್ಣಿಯಲ್ಲಿ ಕಾಯಿಸುತ್ತಾ, ಹುರಿಯುತ್ತಾ ಚೆನ್ನಾಗಿ ಸುಡುತ್ತಾ ಬಗೆಬಗೆಯ ಭಕ್ಷಗಳನ್ನು ಮಾಡಿ ಬಾಯಿ ಚಪ್ಪರಿಸುತ್ತಾ ಇದೆ. ಅಯ್ಯೋ ವಿಧಿಯೇ... ಇದೇನು ನಿನ್ನ ಲೀಲೆ? ಒಟ್ಟಿನಲ್ಲಿ ನಮ್ಮ ಕರ್ಮವನ್ನು ಮಾಡಿ ಫಲಾಫಲಗಳನ್ನು ಆ ಭಗವಂತನಿಗೆ ಅರ್ಪಿಸೋಣ... ಆಪಾತ್‌ಕಾಲದಲ್ಲಿ ಆತನಲ್ಲದೆ ನಮಗಾರು ನೆಂಟರು? ಆಕಾಶದಿಂದ ದೇವನು ಬರಲಾಗೋಲ್ಲವೆಂದೇ ನಿಮ್ಮಂಥಹ ಸ್ನೇಹಿತರನ್ನು ದಯಪಾಲಿಸಿರುವನು. "ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ" . ನಿಷ್ಕಂಲ್ಮಶ ಪ್ರೀತಿಯ ಸ್ನೇಹವೊಂದಿದ್ದರೆ ಎಂತಹ ದುರ್ಬಲನೂ ಸಬಲನಾಗುತ್ತಾನೆಂದು ನನ್ನ ಭಾವನೆ. ಎಂದಿನಂತೆ ನಿಮಗೆ ಪ್ರೀತಿಯ ಶುಭದಿನ ಶುಭೋದಯ ನನ್ನ ಸನ್ಮಿತ್ರರೆ

ಅರೋಗ್ಯಭಾಗ್ಯವನು ಮನಕೆ ತನುಗೆಂತಂತೆ
ಹಾರಯಿಸುವೊಡೆ ಹಲವು ಸರಳನೀತಿಗಳ
ಧಾರಯಿಸು ನೆನಪಿರಲಿನುಡಿಯಲಿ ನಡತೆಯಲಿ
ಪಾರಾಗು ಸುಳಿಯಿಂದ - ಮಂಕುತಿಮ್ಮ

ಸ್ನೇಹಿತರೆ ಮೊದಲು ಮಾನವನು ನೆಮ್ಮದಿಯಾಗಿ ಬದುಕಲು "ಆರೋಗ್ಯಭಾಗ್ಯ" ಬೇಕೇ ಬೇಕು. ಅಂತೆಯೇ ನಮ್ಮ ತನು ಮನಗಳು ಸರಳವಾದ ಹಲವು ನೀತಿಗಳನ್ನು ಧರಿಸುವಂತೆ ರೂಪಿಸಿಕೊಳ್ಳಬೇಕು. ಹಾಗೆ ಅಳವಡಿಸಿಕೊಂಡ ನಡೆನುಡಿಯಲ್ಲಿ ತತ್ವವಿರಬೇಕು ಮತ್ತು ಅನೀತಿಯೆಂಬ ಸುಳಿಯಿಂದ ಪಾರಾಗಿಬಿಟ್ಟಲ್ಲಿ ನಮ್ಮ ಸಮ ಯಾರಿಹರು? ನೆಚ್ಚಿನ ತಿಮ್ಮ/ತಿಮ್ಮಿಯರಿಗೆ ಆರೋಗ್ಯಭಾಗ್ಯ ಸಿದ್ದಿಸಿ, ನೂರ್ಕಾಲ ಚೆನ್ನಾಗಿ ಬಾಳಿರೆಂದು ಕೋರುತ್ತಾ ಎಂದಿನಂತೆ ನಿಮ್ಮ ಸ್ನೇಹಿತನ ಶುಭನುಡಿ- ಶುಭದಿನ ಶುಭೋದಯ

ಬರದಿಹುದರಣೆಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತರುವುದನು ಕೇಡುಗಳ ನಡುವೆ
ಇರುವ ಭಾಗ್ಯವೆ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯಲೊ - ಮಂಕುತಿಮ್ಮ

ಸ್ನೇಹಿತರೆ... ಇಲ್ಲದಿರುವುದಕ್ಕೆ ಚಿಂತಿಸುತ್ತಾ, ಕಣ್ಣ ಮುಂದೆ ಇರೋ ಸುಖವ ತಿರಸ್ಕರಿಸದಿರಿ... ಇರೋ ಸುಖವನ್ನು ಕಡೆಗಣಿಸಿ ಇಲ್ಲದ ಸುಖವ ಹುಡುಕದಿರಿ. ಯಾವತ್ತೂ ಕೆಟ್ಟದರ ನಡುವೆ ಒಳ್ಳೇಯದೂ ಇರುತ್ತದೆ, ಅಂತವುಗಳನ್ನು ಗುರುತಿಸಿ......ಇರುವ ಸುಖವ ಮರೆತು, ಅದು ಕರೆದರೆ ಒಲ್ಲೆಯೆನ್ನದಿರಿ.. ಅಲ್ಪವೋ , ಅಗಾಧವೋ ಯಾವುದಾದರೂ ಸರಿ, ಸಂತೋಷದಿಂದ ಸ್ವೀಕರಿಸಿ... ಅದೇ ಸುಖದ ಹಾದಿ ಮತ್ತು ಸುಖೀಜೀವನ... ನನ್ನ ತಿಮ್ಮ/ತಿಮ್ಮಿಯರು ಯಾವಾಗಲೂ ಸುಖದಿಂದ ಇರಲೆಂದು ಹಾರೈಸುತ್ತಾ ಎಂದಿನಂತೆ ಶುಭದಿನ ಶುಭೋದಯ

ತಡಕಾಟ ಬದುಕೆಲ್ಲವೇಕಾಕಿಜೀವ ತ
ನ್ನೊಡನಾಡೀ ಜೀವಗಳ ತಡಕಿ ಮಮತೆಗಳ
ಪಿಡೀಯಲಲೆದಾಡುಗುಂ, ಪ್ರೀತಿ ಋಣ ಮಮತೆಗಳ
ಮಡುವೊಳೋಲಾಡುತ್ತೆ - ಮಂಕುತಿಮ್ಮ

ಸ್ನೇಹಿತರೇ ನಮ್ಮಯ ಬದುಕೇ ಒಂದು ತಡಕಾಟ, ಆ ತಡಕಾಟದಲ್ಲಿ ನಮ್ಮಯ ಈ ಒಂಟಿ ಜೀವ ತನ್ನಯ ಜೊತೆಗಿನ ಜೀವಗಳನ್ನು ಹಿಡಿಯಲು ಕೈ ಚಾಚಬಹುದು... ತನ್ನಯ ಮನದನ್ನೆಯ ಜೀವಕ್ಕಾಗಿ ಹಂಬಲಿಸಿ ತಡಕಾಡಬಹುದು.. ಅಯ್ಯೋ ಆ ತಡಕಾಟದಲ್ಲಿ ಎಂತೆಂತಹ ನೋವು-ನಲಿವು ಇರಬಹುದಲ್ಲವೆ ಆ ನೋವು ನಲಿವಿನ ಪ್ರೀತಿ-ಪ್ರೇಮಗಳ ಜೊತೆ ಉತ್ತಮ ಗುಣವುಳ್ಳ ಸ್ನೇಹಿತರೂ, ಆಪ್ತಮಿತ್ರನೂ, ಮೇಲಾಗಿ ತಂದೆ ತಾಯಿ, ಸೋದರ-ಸೋದರಿಯರ ಮಮತೆಗಳ ಮಡುವಿನಲ್ಲಿ... ಓಹ್ ಸದಾ ಓಲಾಡುತ್ತಲೇ ಇರುತ್ತೇವಲ್ಲಾ? ಹೂಂ ಭಗವಂತನಾಡಿಸುವ ಪಾತ್ರದಾರಿಗಳಲ್ಲವೆ? ಸದಾ ಭಗವಂತನ ಅನುಗ್ರಹ ಇರಲೆಂದು ಕೋರುತಾ ನಿಮಗೆ ಎಂದಿನಂತೆ ಪ್ರೀತಿಯ ಶುಬದಿನ ಶುಭೋದಯ

ಸುಂದರವನೆಸಗು ಜೀವನದ ಸಾಹಸದಿಂದ
ಕುಂದಿಲ್ಲವದಕೆ ಸಾಹಸಭಂಗದಿಂದೆ
ಮುಂದಕದು ಸಾಗುವುದು ಮರಳಿ ಸಾಹಸದಿಂದ
ಚೆಂದ ಧೀರೋದ್ಯಮವೆ - ಮಂಕುತಿಮ್ಮ

ನಮ್ಮ ಜೀವನದಲ್ಲಿ ಏನೇ ಅಡ್ಡಿಆತಂಕಗಳು ಎದುರಾದರೂ ಅದನ್ನು ಧೈರ್ಯದಿಂದ, ಸಾಹಸದಿಂದ ಸಮರ್ಥವಾಗಿ ಎದುರಿಸಿದರೆ ನಮ್ಮೀ ಬದುಕು ಸುಂದರವಲ್ಲವೆ? ಒಮ್ಮೆ ಸೋಲಾದರೆ ನಮ್ಮೀ ಬದುಕೇನೂ ಕುಂದಿಹೋಗಲಾರದು.. ನಿಧಾನವಾಗಿ ಎಡವಿದ್ದೇಲ್ಲಿ ಎಂದು ಅರಿತು, ಮತ್ತೆ ಅಂತಹ ತಪ್ಪುಗಳನ್ನು ಮಾಡದೆ ಧೈರ್ಯವಾಗಿ ಮುನ್ನುಗ್ಗುತ್ತಾ ಸಾಗಿದಲ್ಲಿ ಜಯ ಕಟ್ಟಿಟ್ಟ ಬುತ್ತಿ.. ನಮ್ಮಯ ಬದುಕು ಕೂಡ ಧೀರೋದ್ದಾತವಾಗಿ ಸಾಗುತ್ತಲಿರುತ್ತದೆ...ಅಂತಹ ಧೀರ ಸಾಹಸವೃತ್ತಿ ನನ್ನ ತಿಮ್ಮಿ/ತಿಮ್ಮಂದರರಿಗೆ ಒಲಿಯಲೆಂದು ಆಶಿಸುತ್ತಾ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ತಿರುಗಿಸಲಿ ವಿಧಿರಾಯನಿಚ್ಚೆಯಿಂ ಯಂತ್ರವನು
ಚರಿಕೆ ತಾರಾಗ್ರಹಗಳಿಷ್ಟವೋದಂತೆ
ಪರಿಹಾಸದಿಂ ಕರ್ಮ ದೈವ ಕೇಕೆಗಳಿಡಲಿ
ಸ್ಥಿರಚಿತ್ತ ನಿನಗಿರಲಿ - ಮಂಕುತಿಮ್ಮ

ನಮ್ಮ ಬಾಳದೋಣಿಯಲ್ಲಿ ಆ ವಿಧಿಯು ಅತನ ಇಚ್ಚೆಯಂತೆ ಯಂತ್ರವನ್ನು ತಿರುಗಿಸಲಿ. ತಾರಾಮಂಡಲಗಳು ತಮ್ಮ ಇಷ್ಟ ಬಂದ ಕಡೆ ಚಲಿಸಲಿ. ನಮ್ಮ ನಮ್ಮ ಕರ್ಮ ಹಾಗು ದೈವವೇ ಪರಿಹಾಸ ಮಾಡಲಿ. ಆದರೆ ನಮಗೆ ದೃಡಚಿತ್ತ ಇದ್ದಲ್ಲಿ ಎಂತಹುದೇ ಆಡ್ಡಿಆತಂಕಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದಿನಂತೆ ನನ್ನ ಸ್ನೇಹಿತರೆ ನಿಮಗಿದೋ ಶುಭದಿನ ಶುಭೋದಯ

ಪುಲಿ ಸಿಂಗದುಚ್ಚ್ವಾಸಹಸು ಹುಲ್ಲೆ ಹಯದುಸಿರು
ಹುಳು ಹಾವಿಲಿಯ ಸುಯ್ಲು, ಹಕ್ಕಿ ಹದ್ದುಯ್ಲು
ಕಲೆತಿರ್ಪುವೀಯೆಲ್ಲ ಸಾಮುಸಿರ್ವೆಲರಿನಲಿ
ಕಲಬೆರೆಕೆ ಜಗದುಸಿರು - ಮಂಕುತಿಮ್ಮ

ಕ್ರೂರಿಗಳಾದ ಹುಲಿ, ಸಿಂಹಳ ಉಸಿರು, ಸಾದು ಹಸು- ಜಿಂಕೆಗಳ ಉಸಿರು, ವಿಷಜಂತುಗಳಾದ ಹಾವು ಇಲಿಗಳ ಉಸಿರು, ಹಕ್ಕಿ-ಹದ್ದುಗಳ ಉಸಿರುಗಳು ನಾವು ನಡೆಸಿದ ಉಸಿರಾಟದ ಗಾಳಿಯಲ್ಲಿಯೇ ಬೆರೆತುಬಿಟ್ಟಿದೆ. ಇನ್ನು ನಮಗೆ ಈ ಜಗದಲ್ಲಿ ಪರಿಶುದ್ದವಾಗಿರುವಂತದ್ದು ಏನು ಸಿಗಬಹುದು?? ನಾವು ತಿನ್ನುವ ಆಹಾರದಿಂದ ಹಿಡಿದು ಎಲ್ಲವೂ ಕಲಬೆರೆಕೆಯೇ ಆಗಿದೆಯಲ್ಲ? ಪರಿಶುದ್ದವಾಗಿ ಸಿಗುವಂತದ್ದು ಈ ಜಗದಲ್ಲಿ ಒಂದೇ... ಅದು "ಸ್ನೇಹ" ಎನ್ನುವುದೇ ನನ್ನ ಭಾವನೆ... ನನ್ನ ಮೆಚ್ಚಿನ ಸ್ನೇಹಿತರೇ... ಅದಕ್ಕೇಂದು ಲೋಪವನ್ನು ತರದೆ, ಪರಿಶುದ್ದವಾದ ಸ್ನೇಹವನ್ನು ಕೊಟ್ಟು, ಸ್ನೇಹವನ್ನು ಪಡೆಯಿರೆಂದು ಆಶಿಸುವೆ. ನಿಮಗೆ ನಿಮ್ಮ ಅತ್ಮೀಯ ಸ್ನೇಹಿತನ ಪ್ರೀತಿಯ ಶುಭನುಡಿ - ಶುಭದಿನ ಶುಭೋದಯ

ಸುರಸಭೆಯಲಿ ಗಾಧಿಸುತ ವಸಿಷ್ಟ ಸ್ಪರ್ದೆ
ಧರೆಯೊಳದರಿಂ ಹರಿಶ್ಚಂದ್ರಂಗೆ ತಪನೆ
ಬರುವುದಿಂತೆತ್ತಣೆನೊ ಬೇಡದ ಪ್ರಾರಬ್ದ
ಕರುಮಗತಿ ಕೃತ್ರಿಮವೊ - ಮಂಕುತಿಮ್ಮ

ಒಮ್ಮೆ ಇಂದ್ರನ ಸಭೆಯಲ್ಲಿ ವಿಶ್ವಾಮಿತ್ರ ಮಹರ್ಷಿಗೂ, ವಸಿಷ್ಟ ಮಹರ್ಷಿಗೂ ಸ್ಪರ್ಧೆ ನಡೆಯಿತಂತೆ.. ಇವರ ಸ್ಪರ್ಧೆಯಿಂದ ಭೂಲೋಕದಲ್ಲಿ ರಾಜ ಹರಿಶ್ಚಂದ್ರನಿಗೆ ಕಷ್ಟವಾದ ವಿಷಯ ನನ್ನ ತಿಮ್ಮ ತಿಮ್ಮಿಯರಿಗೆ ಗೊತ್ತೆ ಇದೆ ಹೀಗೆ ನಮ್ಮಂಥಹ ಹುಲುಮಾನವರಿಗೆ ಅನಗತ್ಯವಾಗಿ ಒದಗಿಬಂದ ಗಂಡಾತರಗಳು ಗಂಡಾತರಗಳೂ ಹೆಂಗೆ ಬರುತ್ತವೆಯೋ ಗೊತ್ತಾಗೋಲ್ಲ, ಆದರೆ ಇದು ಕೇವಲ ಕೃತಿಮವೇ ಆಗಿರುತ್ತೆ ಅಂತೆಯೇ ಸುಖಾಂತ್ಯವಾಗಿಯೇ ಇರುತ್ತದೆ ಆ ಭಗವಂತನ ಕೃಪೆಯಿಂದ.... ಅಲ್ಲವೆ ಸ್ನೇಹಿತರೆ? ಎಂದಿನಂತೆ ನಿಮ್ಮ ಸ್ನೇಹಿತ ರವಿಯ ಶುಭದಿನ ಶುಭೋದಯ


ಸ್ವಾಭಾವಿಕವ ಮರೆತು ನಭಕೇಣೆ ಹೂಡುವುದುಮ್
ಅಭಾಸವನು ಸತ್ಯವೆಂದು ಬೆಮಿಸುವುದುಮ್
ಸೌಭಾಗ್ಯಗಳನರಸಿ ದೌರ್ಭಾಗ್ಯಕೀಡಹುದುಮ್
ಅಭಿಶಾಪ ನರಕುಲಕೆ - ಮಂಕುತಿಮ್ಮ

ನಾವು ಸಹಜತೆಯನ್ನು ಮರೆತು ಸ್ವಾಭಾವಿಕವಾಗಿ ಆಕಾಶಕ್ಕೆ ಏಣೆಯನ್ನು ಹಾಕಲು ಹೋಗುತ್ತೇವೆ ಇಲ್ಲವೆ ನಾವು ಕಂಡ ಬ್ರಾಂತಿಯನ್ನೇ ಸತ್ಯವೆಂದು ಭ್ರಮಿಸುತ್ತೇವೆ. ಸಿರಿ ಸುಖಗಳ ಬೆನ್ನೆತ್ತಿ ದುಃಸ್ಥಿತಿಗೆ ಸಹಾ ಈಡಾಗುತ್ತೇವೆ. ಇದು ನಮ್ಮೊಬ್ಬರ ಕಥೆಯಲ್ಲ, ಇಡೀ ಮಾನವಕುಲಕ್ಕೆ ಅಂಟಿದ ದೊಡ್ಡ ಅಭಿಶಾಪ... ಹೂಂ ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದ್ ಇರಲಿ ಅಲ್ಲವೆ ತಿಮ್ಮ/ತಿಮ್ಮಿಯರೆ...... ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯು ಶುಭನುಡಿ = ಶುಭದಿನ , ಶುಭಸಂಜೆ ಮತ್ತು ವಿಶೇಷವಾಗಿ ಶುಭವಾರಂತ್ಯ

ಹೇಮಕುಂಭದಿಕೊಳಚೆರೊಚ್ಚುನೀರ್ಗಳ ತುಂಬಿ
ರಾಮಣೀಯಕದೊಳಿಟ್ಟಾಮಗಂಧವನು
ಪ್ರೇಮಪುಷ್ಪಕೆ ಮೊನಚು ಗರಗಸವನಂಚರಿಸಿ
ಏಂ ಮಾಡಿದನೊ ಬೊಮ್ಮ - ಮಂಕುತಿಮ್ಮ

ಸ್ನೇಹಿತರೆ "ಪ್ರೇಮ"ವೆಂಬ ಮೋಹಪಾಶದಲ್ಲಿ ಬಿದ್ದುಹೋಗುವ ಮುನ್ನ ಒಮ್ಮೆ ಯೋಚಿಸಿ... ಆ ಭಗವಂತನು ಚಿನ್ನವೆಂಬ ಬಿಂದಿಗೆಯಲ್ಲಿ ಕೊಳಚೆ ನೀರನ್ನು ತುಂಬಿಸಿ, ದುರ್ವಾಸನೆಯ ಹಸಿಮಾಂಸವನ್ನು ರಮಣೀಯವಾಗಿರಿಸಿದ್ದಾನೆ. ಪ್ರೇಮದ ಕುಸುಮಕ್ಕೆ ಚೂಪಾದ ಗರಗರಸದ ಅಂಚನ್ನು ಇಟ್ಟುಬಿಟ್ಟಿದ್ದಾನೆ.. ಖಂಡಿತ ಗರಗಸದ ಅಂಚು ಸೋಕದೆ ಬಿಡಲಾರದು.. ಏನೋ ನನ್ನ ಹಾಗೆ ಜಾಣತನದಿಂದ ತಪ್ಪಿಸಿಕೊಳ್ಳುತ್ತೀರೆಂದು ನನಗೆ ಆಶಾಭಾವನೆ (ಅಬ್ಬ ಇಲ್ಲೂ ಆಶಾಳ ನೆನಪು) ಸ್ನೇಹಿತರೆ ಸ್ವಲ್ಪ ತುಂಟಾಟ, ತಲೆಹರಟೆ, ಹುಸಿಕೋಪ, ಅಗಾಧ ಪ್ರೀತಿವಿಶ್ವಾಸ ಇದ್ದರಲ್ಲವೆ ಜೀವನ ಹಾಲು ಜೇನಿನಂತೆ..... ಎಂದಿನಂತೆ ನಿಮಗೆ ಶುಭದಿನ ಶುಭೋದಯ

ಆಸೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೊಸದಾಟವೊ ದೈವ - ಮಂಕುತಿಮ್ಮ
ಭಗವಂತನು ನಮ್ಮ ಮೇಲೆ ಮೋಸದಾಟವು ಹೂಡಿ, ನಮ್ಮತ್ತ ಆಸೆಯೆಂಬ ಬಲೆಯನ್ನು ಬೀಸುತ್ತಾನೆ.ಕೆಲವೊಮ್ಮೆ ತೊಡರುಕಾಲನ್ನು ಅಡ್ಡಲಾಗಿಟ್ಟು ಬೀಳುಸುತ್ತಾನೆ. ಮತೊಮ್ಮೆ ನಮ್ಮನ್ನು ಘಾಸಿಗೊಳ್ಳುವಂತೆ ಮಾಡಿ ಬಾಯಿಬಾಯಿ ಬಿಡುವಂತೆ ಮಾಡುತ್ತಾನೆ. ಕೊನೆಯದಾಗಿ ಮೈಸವರಿ ಗುಟ್ಟಾಗಿ ನಗುತ್ತಾನೆ ಕೂಡ.... ಅದಕ್ಕೆ ಸ್ನೇಹಿತರೆ ಬರುವ ಕಷ್ಟಕಾಲವು ಹಾಗು ಸುಖ ಕಾಲವೂ ಯಾವುದು ಸಹ ಶಾಶ್ವತವಲ್ಲ. ಇರುವಷ್ಟು ದಿನ ನೆಮ್ಮದಿಯಾಗಿ ಸಮನ್ವಯತೆಯಿಂದ ಕೂಡಿ ಬಾಳಿ ಕೈಲಾದರೆ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಬಾಳೋಣ... ಪ್ರತಿಯೊಬ್ಬರ ಹೃದಯದ ಕಮಲದಿ ನೆಲೆಸಿರುವ ಆ ಪರಮಾತ್ಮನಿಗೆ ವಂದಿಸುತಾ ನಿಮ್ಮ ಸ್ನೇಹಿತನಾದ ರವಿಯು ಎಂದಿನಂತೆ ಶುಭದಿನ ಶುಭೋದಯ ಹೇಳ್ತಾ ಇರೋದು

ಆಸೆ ಬಲೆಯನು ಬೀಸಿ, ನಿನ್ನ ತನ್ನಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡಲೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೊಸದಾಟವೊ ದೈವ - ಮಂಕುತಿಮ್ಮ
ಭಗವಂತನು ನಮ್ಮ ಮೇಲೆ ಮೋಸದಾಟವು ಹೂಡಿ, ನಮ್ಮತ್ತ ಆಸೆಯೆಂಬ ಬಲೆಯನ್ನು ಬೀಸುತ್ತಾನೆ.ಕೆಲವೊಮ್ಮೆ ತೊಡರುಕಾಲನ್ನು ಅಡ್ಡಲಾಗಿಟ್ಟು ಬೀಳುಸುತ್ತಾನೆ. ಮತೊಮ್ಮೆ ನಮ್ಮನ್ನು ಘಾಸಿಗೊಳ್ಳುವಂತೆ ಮಾಡಿ ಬಾಯಿಬಾಯಿ ಬಿಡುವಂತೆ ಮಾಡುತ್ತಾನೆ. ಕೊನೆಯದಾಗಿ ಮೈಸವರಿ ಗುಟ್ಟಾಗಿ ನಗುತ್ತಾನೆ ಕೂಡ.... ಅದಕ್ಕೆ ಸ್ನೇಹಿತರೆ ಬರುವ ಕಷ್ಟಕಾಲವು ಹಾಗು ಸುಖ ಕಾಲವೂ ಯಾವುದು ಸಹ ಶಾಶ್ವತವಲ್ಲ. ಇರುವಷ್ಟು ದಿನ ನೆಮ್ಮದಿಯಾಗಿ ಸಮನ್ವಯತೆಯಿಂದ ಕೂಡಿ ಬಾಳಿ ಕೈಲಾದರೆ ನಾಲ್ಕು ಜನರಿಗೆ ಉಪಯೋಗವಾಗುವ ಹಾಗೆ ಬಾಳೋಣ... ಪ್ರತಿಯೊಬ್ಬರ ಹೃದಯದ ಕಮಲದಿ ನೆಲೆಸಿರುವ ಆ ಪರಮಾತ್ಮನಿಗೆ ವಂದಿಸುತಾ ನಿಮ್ಮ ಸ್ನೇಹಿತನಾದ ರವಿಯು ಎಂದಿನಂತೆ ಶುಭದಿನ ಶುಭೋದಯ ಹೇಳ್ತಾ ಇರೋದು

ಜಗದ ಸಂತಾಪ ಸಂತಸ ಸಂಭ್ರಮಂಗಳಿರಲಿ |

ಜಗದ ಸಂತಾಪ ಸಂತಸ ಸಂಭ್ರಮಂಗಳಿರಲಿ
ಬಗಿದು ನರನೆದೆಯಮ್ ಜೀವವ ಪಿಡಿದು ಕುಲುಕೆ
ನೊಗೆಯಿಪುದು ಮನಸಿಗದು ಕವಿಕಲಾರಸಿಕರ್ಗೆ
ಜಗಂ ಸೂರ್ಯಂ ನೀಂ ಕಮಲ - ಮಂಕುತಿಮ್ಮ

ಈ ಜಗತ್ತಿನಲ್ಲಿರುವ ಸುಖ, ದುಃಖ ಮತ್ತು ಸಂಭ್ರಮಗಳು ಮಾನುಷ್ಯನ ಅಂತರಂಗಕ್ಕೆ ಲಗ್ಗೆ ಹಾಕಿಬಿಡುತ್ತದೆಯಲ್ಲವೆ? ನಿಜ... ಅದು ಜೀವವನ್ನು ಹಿಂಡಿ ಹಿಪ್ಪೆ ಮಾಡಿ ಕುಲುಕಾಡಿಬಿಡುತ್ತದೆ. ಅದು ಕವಿ, ಕಲಾವಿದರ ಮನಸ್ಸಿಗೆ ಮುದ ನೀಡುತ್ತದೆ. ಅದರಲ್ಲೂ ನನ್ನಂಥಹ, ನಿಮ್ಮಂತಹ ರಸಿಕರುಗಳ ಮನಸ್ಸಿಗೆ ಅತಿ ಸಂತೋಷವನ್ನು ನೀಡುತ್ತದೆಯಲ್ಲವೆ? ನಿಜ ಜಗತ್ತು ಸೂರ್ಯನಾಗಿಬಿಟ್ಟರೆ ನಾವೇ ಅರಳಿನಿಂತ ಕಮಲ ಸ್ನೇಹಿತರೆ ನಿಮ್ಮ ರವಿಯು ಎಂದಿನಶುಭನುಡಿ...ಶುಭದಿನ ಶುಭೋದಯ

ಮಕ್ಕಳ ಭವಿಷ್ಯಕ್ಕೆ ಕಕ್ಕುಲಿತಗೊಳಬೇಡ
ಪಕ್ಕಾಗುವುದು ಭಾಗ್ಯವೆಂತೆಂತೊ ಜಗದಿ
ದಕ್ಕಿತೇಂ ಕುರುಪಾಂಡುತನಯರ್ಗೆ ರಾಜ್ಯಸುಖ
ದಿಕ್ಕವರಿಗವರವರೆ - ಮಂಕುತಿಮ್ಮ

ನಮ್ಮ ಮಕ್ಕಳ ಮುಂದಿನ ಭವಿಷ್ಯವನ್ನು ಕುರಿತು ವೃಥಾ ಚಿಂತೆ, ಕಳವಳವನ್ನು ಮಾಡದಿದ್ದರೆ ಸರಿ. ಈ ಲೋಕದಲ್ಲಿ ಭಾಗ್ಯವು ಹೇಗೇಗೋ ಲಭಿಸಬಲ್ಲದು. ಅದು ಪರಮಾತ್ಮನ ಕೃಪೆಯಲ್ಲದೆ ಮತ್ತೇನು? ಉದಾಹರಣೆಗೆ : ಕೌರವರಿಗೂ ಪಾಂಡವರಿಗೂ ರಾಜ್ಯಭಾರದ ಸುಖ ಲಭಿಸಿತೆ? ಅಂತೆಯೆ ಅವರಿಗೆ ಅವರವರೆ ದಿಕ್ಕು ಕಣೋ ಮಂಕುತಿಮ್ಮ/ತಿಮ್ಮಿ.... ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಭಾವತಾಗೋದ್ರೇಕ ತಾನೆ ತಪ್ಪೇನಿಲ್ಲ
ಧೀವಿವೇಕದ ಸಮತೆಯದರಿನದಿರದಿರೆ
ಸ್ವಾವಿದ್ಯೆಯಾ ಮೋಹ ಮಮತೆಯದನಂಟದಿರೆ
ಪಾವನವೂ ಹೃನ್ಮಥನ - ಮಂಕುತಿಮ್ಮ

ಮನುಷ್ಯರಿಗೆ ಭಾವ-ರಾಗ, ರೋಷ ದ್ವೇಷ, ಮೋಹ-ಕಾಮನೆಗಳಿದ್ದರೆ ತಪ್ಪೇನಿಲ್ಲ.. ಆದರೆ ನಮ್ಮ ವಿವೇಕ, ಸಮತಾಭಾವನೆಗಳಿಗೆ ಧಕ್ಕೆಯಾಗಬಾರದು. ಅಜ್ಞಾನ, ಅವಿದ್ಯೆಗಳನ್ನು ಮೋಹ, ಮಮತೆಗಳು ಸೋಕದೆ ಇದ್ದರೆ ನಮ್ಮಯ ಬಾಳು ಪಾವನವಲ್ಲವೆ ನನ್ನ ಸನ್ಮಿತ್ರರೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯು ನಿಮಗೆ ಶುಭದಿನ ಶುಭೋದಯ ಹೇಳ್ತಾ.....ರೈಟ್ ಹೇಳೋದು

ಅನುರಾಗದುಃಖಂಗಳೊಮ್ಮೊಮ್ಮೆ ಬಿರುಬೀಸಿ
ಮನದಿ ತೆರೆಗಳ ಕುಲುಕಿ ಕಡೆಯುವುದಿಮೊಳಿತು
ಘನ ವರ್ಷ ಬಿರುಗಾಳಿ ಬಡಿಯಲಿರುಲೋಲ್ ನೆಲನ
ದಿನದ ಸೊಗಸಿಮ್ಮಡಿತೊ - ಮಂಕುತಿಮ್ಮ

ನಮ್ಮ ಬಾಳದಾರಿಯಲ್ಲಿ ಒಮ್ಮೆ ಸುಖ - ದುಃಖಗಳ ಬಿರುಗಾಳಿ ಬೀಸುತ್ತದೆ ಹಾಗೆಯೇ ನಮ್ಮ ಮನಸ್ಸಿನಲ್ಲಿ ಆರ್ಭಟದ ಅಲೆಗಳನ್ನು ಸಹ ಎಬ್ಬಿಸುತ್ತದೆಯಲ್ಲವೆ? ಮೊಸರನ್ನು ಕಡೆಯುವಂತೆ ನಮ್ಮ ಮನಸ್ಸನ್ನು ಕಡೆಯುವುದು ಒಳ್ಳೆಯದೆ... ಅದರಿಂದ ನನ್ನ ನಿಮ್ಮ ಚೆಲುವು ಇನ್ನೂ ದ್ವಿಗುಣಗೊಳ್ಳುತ್ತದೆ ಉದಾಹರಣೆಗೆ ಮೋಡ, ಮಳೆ, ಬಿರುಗಾಳಿ ಹಗಲಿರುಳೆನ್ನದೆ ಬೀಸಲು ನೆಲದ ಮತ್ತು ಆ ದಿನದ ಸೌಂದರ್ಯ ಇಮ್ಮಡಿಗೊಳಿಸುವುದಿಲ್ಲವೆ? ಹಾಗೆ.... ಸ್ನೇಹಿತರೆ ನನ್ನದಲ್ಲದಿದ್ದರೂ ನಿಮ್ಮ ಸೌಂದರ್ಯವಂತೂ ದ್ವಿಗುಣಗೊಳ್ಳಿಸಲೆಂದು ಆ ಭಗವಂತನಲ್ಲಿ ಮೊರೆಯಿಡುತಾ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ ಎಂದಿನಂತೆ ಶುಭದಿನ ಶುಭೋದಯ

ಬಂಧನವದೇನಲ್ಲ ಜೀವಜೀವಪ್ರೇಮ
ಒಂದೆ ನೆಲೆ ಜೀವವರೆ, ಬೆರತರಳೆ ಪೂರ್ಣ
ದಂದುಗವನ್ ಅರೆಗೆಯ್ದು, ಸಂತಸವನಿಮ್ಮಡಿಪ
ಬಾಂಧವ್ಯ ದೈವಕೃಪೆ - ಮಂಕುತಿಮ್ಮ

ಎಲವೋ ತಿಮ್ಮ ತಿಮ್ಮಯರೆ, ಪ್ರಕೃತಿಯಲ್ಲಿನ ಜೀವಜೀವಗಳ ನಡುವಿನ ಬಾಂಧವ್ಯಗಳ ಒಲವೇ ಸಹಜ ಕ್ರಿಯೆ, ಒಂಟಿಯಾಗಿ ನಿಂತರೆ ಅರ್ಧ ಜೀವ, ಎಲ್ಲರೊಡನೆ ಬೆರತು ಅರಳಿದರೆ ಪೂರ್ಣಜೀವ ಅದು ಬಂಧನವಲ್ಲ ಮಿತ್ರರೆ... ಎದುರಾಗುವ ಕಷ್ಟಕೋಟಲೆಗಳನ್ನು ಅರ್ಧಮಾಡಿ ನಂತರ ಸಂತೋಷವನ್ನು ಎರಡರಷ್ಟು ಉಂಟುಮಾಡುವ ಆ ಬಾಂಧವ್ಯ ನಮಗೆ ದೇವರ ಕೃಪೆಯಾಗಿದೆ. ಅಂತಹ ದೇವನು ಕರುಣಿಸಿದ ಆ ಬಾಂಧವ್ಯ ನಿಮಗೆ ನಿರಂತರವಾಗಿರಲೆಂದು ಆಶಿಸುತ್ತಾ ನಿಮಗೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ "ಶುಭದಿನ ಶುಭೋದಯ"

ಇಹುದಕಿಂತೊಳಿತಿಹುದು : ಒಳಿತ ಗಳಿಸಲ್ಪಹುದು
ಸಹಸಿಸುವೆನದಕೆನುವ ಮತಿಯಿನೇ ಪ್ರಗತಿ
ರಹಸಿಯದ ಬುಗ್ಗೆಯದು, ಚಿಮ್ಮುತಿಯುದೆಲ್ಲರೊಳು
ಸಹಜವಾ ಮತಿಕೃತಕ - ಮಂಕುತಿಮ್ಮ

ಮುಂದೆ ನಮಗೆ ಇನ್ನು ಒಳ್ಳೆಯ ಬದುಕುಂಟು.. ಅದನು ಪಡೆಯಲು ಜೀವನವನ್ನೇ ಸವೆಸುವೆನು ಎಂಬ ಮನಸ್ಸು ಇದ್ದಲ್ಲಿ ಖಂಡಿತ ಪ್ರಗತಿಗೆ ನಾಂದಿಯಾಗುವುದು. ಜೀವನದಲ್ಲಿ ನಾವುಗಳು ಕೈಗೊಳ್ಳುವ "ಸಂಕಲ್ಪ"ವೇ ರಹಸ್ಯದ ಚಿಲುಮೆ... ಎಲ್ಲರಲ್ಲೂ ಅದು ಚಿಮ್ಮುತ್ತಿರುತ್ತದೆ.. ಆದರೆ ದೃಡಸಂಕಲ್ಪದ ಕೊರತೆ ಮಾತ್ರ ಇದ್ದೇಇರುತ್ತದೆ.. ನನ್ನ ಸ್ನೇಹಿತರೆಲ್ಲರೂ ದೃಡಸಂಕಲ್ಪ ಕೈಗೊಳ್ಳುವವರೆಂದು ಆಶಿಸುತ್ತಾ ಎಂದಿನಂತೆ ಶುಭದಿನ ಶುಭೋದಯ

ಹಿಮಗಿರಿಯ ಕಂಡಂಗೆ ಕ್ರಿಮಿಯ ಹಿರಿಮೆಯದೇನು ?
ಕ್ರಿಮಿಗೆ ಹಸಿವುಂಟಿನಿತು ಬೆದಕಾಟವುಂಟು
ಅಮಿತ ಸಂತತಿಯುಂಟು ಹಿಮಗಿರಿಯ ಸಮಯುಗದ
ಕ್ರಿಮಿಪಂಕ್ತಿ ಕಿರಿದಹುದೆ? - ಮಂಕುತಿಮ್ಮ

ಅಚಲವಾಗಿ ನಿಂತ ಬೃಹತ್ ಹಿಮಾಲಯ ನೋಡಿದಾಗ ಸಣ್ಣ ಕ್ರಿಮಿಯ ಹಿರಿಮೆ ದೊಡ್ಡದು ಎಂದೆನಿಸುವುದಿಲ್ಲ... ಆದರೆ ಕ್ರಿಮಿಗೆ ಹಸಿವುಂಟು, ಅಲೆದಾಟ, ಅಸಂಖ್ಯಾತ ಪೀಳಿಗೆಗಳಿರುತ್ತವೆ... ಹೀಗಿರುವಾಗ ಕ್ರಿಮಿಗಳ ಸಾಲನ್ನು ಕಡೆಗಣಿಸಲಾಗದು.. ಅಂತೆಯೇ ಯಾರ ಹಿರಿಮೆಯನ್ನು ಕಡೆಗಣಿಸಬಾರದಲ್ಲವೆ? ಅವರವರ ಯೋಗ್ಯತಾನುಸಾರವಾಗಿ ಅವರವರ ಹಿರಿಮೆ ಇದ್ದೇಇರುತ್ತದೆ... ಎಂದಿನಂತೆ ನನ್ನ ಸ್ನೇಹಿತರಾದ ನಿಮಗೆ ರವಿಯ ಪ್ರೀತಿಯ ಶುಭದಿನ ಶುಭೋದಯ

ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು? |

ತಿಳಿವಿಗೊಳಿತೆನಿಸಿದುದು ನಡೆಯೊಳೇತಕ್ಕರಿದು?
ಕುಳಿ ಮೇಡು ದೂರ ಮತಿಮನಸುಗಳ ನಡುವೆ
ಒಳಗಿನಾಯಣ್ಣೇಬತ್ತಿಗಳೆರಡುಮೊಡವೆರೆಯೆ
ಬೆಳಕು ಜೀವೋನ್ನತಿಗೆ - ಮಂಕುತಿಮ್ಮ

ತಿಳಿದುಕೊಂಡಿದ್ದರೆ ಸಾಲದು ತಿಮ್ಮ/ತಿಮ್ಮಿಯರೆ.... ತಿಳಿದ ಒಳ್ಳೇಯದೆನಿಸಿದುದನ್ನು ನಮ್ಮ ನಡತೆಯಲ್ಲಿ ಜಾರಿಗೊಳ್ಳಿಸಬೇಕು. ಈ ಬಾಳ ದಾರಿಯಲ್ಲಿನ ಏರು-ಪೇರು, ನಮ್ಮ ಬುದ್ದಿ-ಮನಸ್ಸುಗಳನ್ನೇ ಎಣ್ಣೆ-ಬತ್ತಿಗಳಂತೆ ಒಂದುಗೂಡಿಸಿ ಬೆಳಗಿದರೆ ಅಹಾ... ಬೆಳಕು ದೊರೆತು ಬದುಕು ಸಾರ್ಥಕತೆ ಕಂಡೀತು.. ನೆಚ್ಚಿನ ಸ್ನೇಹಿತ/ಸ್ನೇಹಿತೆಯರೆಗೆ ನಿಮ್ಮ ಸ್ನೇಹಿತನಾದ ರವಿಯ ಶುಭನುಡಿ- ಶುಭದಿನ ಶುಭೋದಯ

ಎನ್ನ ಬೇಡಿಕೆ ನಷ್ಟವೆಹುದೆಂತು ದೇವನಿರೆ?
ಅನ್ಯಾಯ ಜಗವೆಲ್ಲ : ದೇವನಿರನೆನುತ
ತನ್ನ ತನ್ನನುಭವವ ನಂಬಲೋರೊರ್ವನುಂ
ಭಿನ್ನವಾಗದೆ ಸತ್ಯ? - ಮಂಕುತಿಮ್ಮ

ಸ್ನೇಹಿತರೆ, ಈ ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಅನ್ಯಾಯಕಾರನಾಗಿಯೇ ಕಾಣುತ್ತಾರೆ, ಆ ದೇವರೆಂಬುವವನು ನನಗೆ ಎನೂ ಮಾಡಲಿಲ್ಲ, ನನ್ನ ಬೇಡಿಕೆಗಳನ್ನು ಈಡೇರಿಸಲಿಲ್ಲ. ಈ ಜಗದಲ್ಲಿ ದೇವರೆಂಬುವವನು ಇಲ್ಲವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದಿರುತ್ತಾರೆ. ಆದರೆ ತಮ್ಮ ಅನುಬವವನ್ನೇ ಸತ್ಯ ಎಂದು ನಂಬುವವನ ಸತ್ಯವೇ ದೇವರಲ್ಲವೆ? ಅದೇ ನಮಗೆ ಆ ದೇವನು ಕೊಟ್ಟ ಜ್ಞಾನವೆಂದುಕೊಂಡರೆ ..... ಹುಂ ನನ್ನ ಜಾಣ ತಿಮ್ಮ/ತಿಮ್ಮಿಯರು ಸಹ ತಮ್ಮ ಅನುಭವಗಳನ್ನೇ ನಂಬಿ ನಡೆವವರೆಂದು ಹರ್ಷಿಸುತ್ತಾ ಎಂದಿನಂತೆ ನಿಮಗೆ ಶುಭದಿನ ಶುಭೋದಯ

ಶಕ್ತಿ ಮೀರ‍್ದ ಪರೀಕ್ಷೆಗಳನಿ ವಿಧಿ ನಿಯಮಿಸಿರೆ
ಯುಕ್ತಿಮಿರ‍್ದ ಪ್ರಶ್ನೆಗಳನು ಕೇಳುತಿರೆ
ಚಿತ್ತವನು ತಿರುಗಿಸೊಳಗಡೆ : ನೋಡು, ನೋಡಲ್ಲಿ
ಸತ್ತ್ವದಚ್ಚಿನ್ನ ಝರಿ - ಮಂಕುತಿಮ್ಮ

ಒಮ್ಮೊಮ್ಮೆ ವಿಧಿಯು ನಮ್ಮ ಶಕ್ತಿ ಮೀರಿ ಪರೀಕ್ಷೆಗಳನ್ನು ಒಡ್ಡಿದರೆ, ನಮ್ಮ ಜಾಣ್ಮೆಗೆ ಮೀರಿದ ಪ್ರಶ್ನೆಗಳನ್ನು ಕೇಳಿದರೆ ಹೆದರದೆ, ಅಂಜದೆ, ಅಳುಕದೆ ಸಾವಧಾನದಿಂದ ಲಕ್ಷ್ಯವನ್ನು ಕೊಟ್ಟುನೋಡಿ... ನಿರಂತರ ಸತ್ವದ ಚಿಲುಮೆಯೇ ಉಕ್ಕುತ್ತಿರುತ್ತದೆ.. ಜಾಣ್ಮೆಯಿಂದ ಜೀವನದ ಪರೀಕ್ಷೆಗಳನ್ನು ಎದುರಿಸಿದಲ್ಲಿ ನಮಗೆ ಸಮಸ್ಯೆಯೇ ಬರುವುದಿಲ್ಲ..... ಸ್ನೇಹಿತರೆ ನಿಮಗೆ ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಆಳವನು ನೋಡಿ ಬಗೆದಾಡುವಾ ಮಾತಿಂಗೆ
ರೂಡಿಯರ್ಥವದೊಂದು ಗೂಡಾರ್ಥವೊಂದು
ವಾರಿಧಿಯ ದಾಂಟುವುಡುಪಕೆ ಗಾಳಿಪಟವೊಂದು
ಕೋಲು ಹುಟ್ಟೊಂದು ಬಲ - ಮಂಕುತಿಮ್ಮ

ಮಾತು ಬಂಗಾರ, ಮೌನ ಬೆಳ್ಳಿ ಎಂದು ಹಿರಿಯರು ಬಹಳ ಹಿಂದೆಯೇ ಹೇಳಿದ್ದಾರೆ. ನಾವಾಡುವ ಮಾತು ಬಹಳ ಅಮೂಲ್ಯ, ಕೋಪದಲಿ ಹೇಳಿದ ಮಾತು ಒಮ್ಮೊಮ್ಮೆ ಸಂಬಂದಗಳನ್ನೇ ಕಡಿದುಬಿಡಬಹುದು. ಉದಾಹರಣೆಗೆ ಗಾಳಿಯ ಶಕ್ತಿ ಬಳಸಿ ಸಾಗಲು ಗಾಳಿಪಟವೊಂದು ಬೇಕಲ್ಲವೆ? ಅಂತೆಯೇ ನಮ್ಮ ಕಂಡು ಇತರರು ನಗಲಾರದಂತೆ, ಬೇಸರ ಪಡದಂತೆ ಇರಲು ನಾವಾಡುವ ಮಾತು ಬಹಳ ಮುಖ್ಯ. ನನ್ನ ತಿಮ್ಮಿ/ತಿಮ್ಮಂದಿರು ಮಾತು ಮುತ್ತಿಗೆ ಸಮವೆಂದು ಅರಿತು ಜಾಣ್ಮಿಯಿಂದ ವರ್ತಿಸುವರೆಂದು ಬಹಳ ಸಂತಸದಿಂದ ನಿಮಗೆ ಶುಭೋದಯ ಶುಭದಿನ ಹೇಳೋದು

ಕಟ್ಟಡದ ಪರಿಯನಿಟ್ಟಗೆಯಂತು ಕಂಡೀತು ?

*****
ಇಂದು ಡಿ.ವಿ.ಜಿ ಯವರ ಹುಟ್ಟುಹಬ್ಬ.. ಕನ್ನಡ ಭಗವದ್ಗೀತೆ ಎಂದೇ ಹೆಸರಾಗಿರುವ "ಮಂಕುತಿಮ್ಮನ ಕಗ್ಗ" ರಚಿಸಿ ಸಾಮಾನ್ಯ ಜನರಿಗೆ ಅರ್ಥ ಅಗೋ ಹಂಗೆ ಬರೆದು, ಜೀವನದ ಪಾಠ ಕಳಿಸಿದ ಆ ಗುರುವಿಗೆ ವಂದನೆ ಸಲ್ಲಿಸುತ್ತಾ..
ಕಟ್ಟಡದ ಪರಿಯನಿಟ್ಟಗೆಯಂತು ಕಂಡೀತು ?
ಗಟ್ಟಿನಿಲದದು ಬೀಳೆ ಗೋಡೆ ಬಿರಿಯುವುದು
ಸೃಷ್ಟಿ ಕೊಟೆಯಲಿ ನೀನೊಂದಿಟಿಕೆ : ಸೊಟ್ಟಾಗ
ಪೆಟ್ಟು ತಿನ್ನುವೆ ಜೋಕೆ - ಮಂಕುತಿಮ್ಮ

ಕಟ್ಟಡದ ಒಂದಂಶ ಇಟ್ಟಿಗೆ, ಅದರೂ ಅದು ಕಟ್ಟಡದ ಭವ್ಯತೆಯನ್ನು ತಿಳಿಯದಲ್ಲವೆ? ಆದರೆ ಇಟ್ಟಿಗೆ ಗಟ್ಟಿಯಾಗಿರದಿದ್ದರೆ ಗೋಡೆ ಬಿರುಕು ಬಿಟ್ಟು ಬೀಳುವುದು ಶತಸಿದ್ದವಲ್ಲವೆ? ಗಟ್ಟಿಮುಟ್ಟಾದ ಇಟ್ಟಿಗೆ ಎಷ್ಟು ಮುಖ್ಯ ನೋಡಿ? ಅಂತೆಯೇ ನಮ್ಮ ಬಾಳಜೀವನದ ಕೋಟೆಯಲ್ಲಿಯೂ ನೀವೆಲ್ಲರೂ ಗಟ್ಟಿಇಟ್ಟಿಗೆಗಳಾಗಿರಿ ಎಂದೇ ನನ್ನ ಕೋರಿಕೆ... ಎಂದಿನಂತೆ ನಿಮ್ಮ ಸ್ನೇಹಿತ ರವಿಯ ಶುಭನುಡಿ - ಶುಭದಿನ ಶುಭೋದಯ
******

ಒಂದಗಳು ಹೆಚ್ಚಿರದು, ಒಂದಗಳು ಕೊರೆಯಿರದು
ತಿಂದು ನಿನ್ನನ್ನಋಣ ತೀರುತಲೆ ಪಯಣ
ಹಿಂದಾಗದೊಂದು ಚಣ, ಮುಂದಕುಂ ಕಾದಿರದು
ಸಂದ ಲೆಕ್ಕವದಲ್ಲ - ಮಂಕುತಿಮ್ಮ
ನಮ್ಮ ಪಾಲಿನ ಅನ್ನದಗಳು ಹೆಚ್ಚೂ ಆಗದು ಅಂತೆಯೇ ಕಡಿಮೆಯೂ ಆಗದು. ಅದು ನಿಗದಿಯಾದಷ್ಟೇ ನಮ್ಮನ್ನ ಉಂಡು ಅದರ ಲೆಕ್ಕ ಮುಗಿಯುತ್ತಲೇ ನಮ್ಮ ಪಯಣ... ಅದು ಒಂದು ಕ್ಷಣ ಕಾಲವೂ ಹಿಂದೂ ಅಗದು, ಮುಂದೂ ಅಗದು.. ಕರಾರುವಾಕ್ ಸಮಯ... ಅದರ ನಡುವೆ ಮಾನವ ಸಂಘಜೀವಿಯಾಗಿ ಅನ್ಯರ ಕಷ್ಟಕ್ಕೆ , ಸ್ನೇಹಿತರ ಸುಖದುಃಖಗಳಿಗೆ ನೆರವಾಗಿ, ಬಂಧು-ಬಾಂಧವರೊಂದಿಗೆ ಮತ್ತು ಕುಟುಂಬದ ಸಹಸದಸ್ಯರೊಂದಿಗೆ ಆನಂದದಿಂದ ಜೀವಿಸಲಿ, ಆ ಪರಮಾತ್ಮನ ದಯೆ ಇರಲೆಂದು ಬೇಡುತಾ ನನ್ನ ನೆಚ್ಚಿನ ತಿಮ್ಮ ತಿಮ್ಮಿಯರಿಗೆ ಒಳ್ಳೇದಾಗಲೆಂದು ಕೋರುತಾ ಎಂದಿನಂತೆ ಶುಭದಿನ ಶುಭೋದಯ ಹಾಗು ಶುಭವಾರಂತ್ಯ ಮಿತ್ರರೆ

ಸೌಂದರ್ಯ ಬಾಂಧವ್ಯಗಳು ಬರಿದೆನೆಲಹುದೆ?
ಹೊಂದಿಸವೆ ಕುಂದಿಸವೆ ಜೀವಿಗಳನೆವುಗಳ್
ಸಿಂಧುಪೂರದಿ ಬಿದ್ದವರೊಳೊಬ್ಬರೊಬ್ಬರನು
ಅಂದಿಕೊಳಲದು ಬರಿದೆ? - ಮಂಕುತಿಮ್ಮ

ಸೌಂದರ್ಯ ಮತ್ತು ಬಾಂಧವ್ಯ ಸಾಧಾರಣ ಎನ್ನಲಾಗುವುದಿಲ್ಲ. ಅವು ಜೀವಿಗಳನ್ನು ಹೊಂದಿಸುತ್ತದೆ ಮತ್ತು ಕುಂದಿಸುತ್ತದೆ. ಜೀವಿಗಳನ್ನು ಹೊಂದಿಸುವುದಕ್ಕೆ ಎಂತಹ ಮಧುರ ವಾತಾವರಣವಿರಲಿ, ಅಥವ ಯಾವುದೇ ಋತುಮಾನವಿರಲಿ ಅವು ಸಾಧ್ಯ... ಆದರೆ ಅದೇ ಈ ಸೌಂದರ್ಯ ಮತ್ತು ಬಾಂಧವ್ಯವು ತುಂಬು ಪ್ರವಾಹದಲ್ಲಿ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದಾಗಲೂ ಪರಸ್ಪರ ಅಪ್ಪಿಕೊಂಡಿರಲು ಸಾಧ್ಯವೆ? ಒಟ್ಟಿನಲ್ಲಿ ವಿಧಿಯ ಕೈಗೊಂಬೆಗಳಾಗಿ ನಮ್ಮ ಜೀವನ ನಾಟಕದಲ್ಲಿ ಯಶಸ್ವಿಯಾಗಬೇಕಷ್ಟೆ... ಸ್ನೇಹಿತರೆ ಎಂದಿನಂತೆ ನಿಮಗೆ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

ಕಾಯವನು ಮೃದ್ಬಾಂಡ ಮಾಂಸಪಿಂಡವೆನುತ್ತೆ
ಹೇಯವೆಂದಂದೊಡಾತ್ಮಂಗಪ್ಪುದೇನು?
ಆಯುಧವನದನು ತೊರೆದಾತ್ಮನೇಂಗೈದಪನು
ನ್ಯಾಯ ತನುವಿಗಮಿರಲಿ - ಮಂಕುತಿಮ್ಮ
ನಮ್ಮ ಈ ದೇಹವನ್ನು ಮಣ್ಣಿನ ಕುಡಿಕೆ, ಮಾಂಸದ ಮುದ್ದೆ ಅಥವಾ ಇದು ಶಾಶ್ವತವಲ್ಲದ್ದು, ಅಶಾಶ್ವತ, ಅಸಹ್ಯಕರ ಎಂದು ನಮ್ಮ ದೇಹವನ್ನು ನಾವೇ ಯಾಕೆ ಹಿಯಾಳಿಸಬೇಕು... ಅದರಿಂದ ನಮ್ಮ ಒಳಗಿರುವ ಅತ್ಮನಿಗೆ ಏನೂ ಅಗದಿದ್ದರೂ ಕಸಿವಿಸಿಗೊಳ್ಳಬಹುದು, ಆ ಅತ್ಮಚೈತನ್ಯಕ್ಕೆ ನಮ್ಮ ಈ ದೇಹವೇ ಮುಖ್ಯ ಸಾಧನ, ಅವನು ಈ ದೇಹದೊಳಗೆ ಇರುವ ಕಾರಣದಿಂದ ನಮ್ಮ ದೇಹಕ್ಕೂ ನ್ಯಾಯ ಸಲ್ಲಬೇಕು.. ನನ್ನ ಪ್ರಿಯ ಸ್ನೇಹಿತ/ಸ್ನೇಹಿತೆಯರೆ.. ನಿಮ್ಮೀ ದೇಹಸಿರಿಯನ್ನು ಅತ್ಯುತ್ತಮವಾಗಿ ಕಾಪಾಡಿಕೊಳ್ಳಿ, ಅದೇ ನಿಜವಾದ ಸಿರಿ, ನಿಮ್ಮ ದೇಹದೊಳಗಿರುವ ಅತ್ಮಕ್ಕೂ ಮತ್ತು ನಿಮ್ಮನ್ನು ನೋಡಿದವರಿಗೂ ಉತ್ಸಾಹ, ಸಂತೋಷ. ಎಂದಿನಂತೆ ನಿಮ್ಮ ಸ್ನೇಹಿತನಾದ ರವಿ ಹೇಳೋದು ಶುಭದಿನ ಶುಭೋದಯ

ಗುಹೆಯೇಡಕೆ, ಗುಹೆ ಬಲಕೆ, ನಡುವೆ ಮಲೆ : ಕಣಿವೆಯಲಿ
ವಿಹರಿಪೆ ಹುಲಿ ಬಾರದೆಂದು ನೀಂ ನಚ್ಚಿ?
ರಹಸಿಯದ ಭೂತ ಪಿಡಿಯದ ತೆರದಿ ಬದುಕ
ನಿರ್ವಹಿಸುವುದೆ ಜಾಣ್ಮೆಯಲಿ - ಮಂಕುತಿಮ್ಮ
ನಮ್ಮ ಬಾಳಜೀವನದಲ್ಲಿ ಎಡಕೆ ಒಂದು ಗುಹೆ, ಬಲಕೆ ಮತ್ತೊಂದು ಗುಹೆ... ನಡುವೆಬೆಟ್ಟ ಕಣೆವೆಯ ಹಾದಿಯ ಏರುಪೇರಿನ ಮಾರ್ಗದಲ್ಲಿ ನಮ್ಮ ಜೀವನ ಸವೆಸುತ್ತಿದ್ದಾಗ ಹುಲಿ ಬಾರದೆಂದು ನಂಬಲಾಗುವುದಿಲ್ಲ. ಬಂದರೂ ಬರಬಹುದು....ಆದರೆ ಸಂಶಯದ ಭೂತ ಮಾತ್ರ ಬಂದು ಹಿಡಿಯದಂತೆ ಎಚ್ಚರವಹಿಸಲೇ ಬೇಕು. ಅಂತಹ ಜಾಣ್ಮೆ ನನ್ನ ನೆಚ್ಚಿನ ತಿಮ್ಮ/ತಿಮ್ಮಿಯರಿಗೆ ಬರಲೆಂದು ಆಶಿಸುತ್ತಾ ಎಂದಿನಂತೆ ಪ್ರೀತಿಯ ಶುಭದಿನ ಶುಭೋದಯ

ಅಕ್ಕಿಯೊಳಗನ್ನವನು ಮೊದಲಾರು ಕಂಡವನು?
ಅಕ್ಷರದ ಬರಹಕ್ಕೆ ಮೊದಲಿಗನಾರೋ ?
ಲೆಕ್ಕವಿರಿಸಿದವರಿಲ್ಲ ಜಗ ತನ್ನಾದಿಬಂಧುಗಳ
ದಕ್ಕುವುದೆ ನಿನಗೆ ಜಸ ? - ಮಂಕುತಿಮ್ಮ
ಅಕ್ಕಿಯಿಂದ ಮೊದಲು ಅನ್ನವನ್ನು ಕಂಡವನಾರು? ಅಕ್ಷರದಿಂದ ಮೊದಲು ಬರಹವನ್ನು ಬರೆದವನಾರು? ಈ ಪ್ರಶ್ನೆಗೆ ಜಗತ್ತು ಇಲ್ಲಿಯವರೆಗೂ ಉತ್ತರವನ್ನೆ ಕೊಟ್ಟಿಲ್ಲ ಹಾಗು ಯಾರ ಹೆಸರನ್ನೂ ದಾಖಲಿಸಿಲ್ಲ. ಹೀಗಿದ್ದಾಗ ಯಶಸ್ಸು ನಮ್ಮದು ನಮ್ಮದು ಅಂತ ಬಡಿದಾಡಿಕೊಳ್ಳುವುದೇಕೆ? ಅದು ಹೆಂಗೆ ನಮಗೆ ದಕ್ಕುವುದು?? ಸ್ನೇಹಿತರೆ ರವಿಯು ನಿಮಗೆ ಎಂದಿನಂತೆ ವಿನಯಪೂರ್ವಕವಾಗಿ, ಸ್ನೇಹಶೀಲನಾಗಿ ಶುಭದಿನ ಶುಭೋದಯ ಎಂದೆನುತಾ ಕಾಯಕದಡೆಗೆ ಪಯಣ

ಅಳೆವರಾರ್ ಪೆಣ್‌ಗಂಡುಗಳನಳೆವ ನೂಲುಗಳ?
ಕೆಳೆಪಗೆಗಳೆಲ್ಲವಾಳದಲ್ಲಿ ಬಲು ತೊಡಕು
ಇಳೆಯ ಋಣಗಳ ಲೆಕ್ಕವಿಹುದು ವಿಧಿಯಕ್ಕರದಿ
ತಿಳಿಯಗೊಡನದ ನಮಗೆ - ಮಂಕುತಿಮ್ಮ
ಹೆಣ್ಣು - ಗಂಡುಗಳನ್ನು ಪರಸ್ಪರ ಸೆಳೆದ ಪ್ರೇಮದ ಎಳೆಗಳನ್ನು ಅಳೆಯಲು ಯಾರಿಂದ ಸಾಧ್ಯ?? ಅಬ್ಬಾ ಅಂತಹ ಶಕ್ತಿಯನ್ನು ಅನುಭವಿಸಿ ನೋಡಿ ತಿಳಿಯಬಹುದೆ ಹೊರತು ಅಳೆಯಲು ಸಾಧ್ಯವೇ ನನ್ನ ಪ್ರಿಯ ತಿಮ್ಮ/ತಿಮ್ಮಿಯರೆ ?? ಆ ಅಳದಲ್ಲಿ ಎಂತಹ ಸೆಳೆತವಿದೆ? ಎಂತಹ ಮಧುರಾಮೃತವಿದೆ? ಅಬ್ಬಬ್ಬಾ ವರ್ಣಿಸಲು ಕುಳಿತರೆ ಇಪ್ಪತ್ತನಾಲ್ಕು ಘಂಟೆಯೂ ಸಾಲದು ಭೂಮಿಯ ಋಣಗಳ ಲೆಕ್ಕವೇನೋ ಇದೆ. ಆದರೆ ಬ್ರಹ್ಮನು ಬರೆದ ಬರಹರೂಪದಲ್ಲಿ ತಿಳಿಯಗೊಡುತ್ತಿಲ್ಲವಲ್ಲ? ಹೋಗಲಿ ಬಿಡಿ ತಿಳಿದು ಅಷ್ಟು ದೊಡ್ಡ ಬುದ್ದಿಜೀವಿಯೆಂದು ಅನಿಸದಿದ್ದರೂ ಪರಸ್ಪರ ಪ್ರೇಮದ ಸೆಳೆತದ ಎಳೆಗಳಲ್ಲಿ ಅನಂದವಾಗಿ ಇರಿ ಜೊತೆಗೆ ಜೀವನದ ಕರ್ತವ್ಯಗಳನ್ನು ಮರೆಯದೆ ಮಾಡುತ್ತಾ ಸುಖವಾಗಿ ಕಾಲ ಕಳೆಯಿರೆಂದು ಆಶಿಸುತ್ತಾ ನಿಮ್ಮ ಸ್ನೇಹಿತನಾದ ರವಿಯು ಶುಭೋದಯ, ಶುಭದಿನ ಎನ್ನುತಾ ರೈಟ್ ಹೇಳದೆ ಇಂದು ಪ್ರೇಮದ ಎಳೆಗಳಲ್ಲಿನ ಸುವಾಸನಾಭರಿತ ಕಂಪನ್ನು ಅಸ್ವಾದಿಸುತ್ತಾ, ಅದೇ ಗುಂಗಿನಲ್ಲಿ ಇಂದಿನ ಕೆಲಸ ಮುಗಿಸಲು ಆಣಿಯಾಗುತ್ತಿದ್ದೇನೆ

ಸೃಷ್ಟಿಯಾಶಯವದೇನಸ್ಪಷ್ಟ ಸಂಶ್ಲಿಷ್ಟ
ಇಷ್ಟಮೋಹಕ ದಿವ್ಯಗುಣಗಳೊಂದು ಕಡೆ
ಕಷ್ಟ ಬೀಭತ್ಸ ಘೋರಂಗಳಿನ್ನೊಂದು ಕಡೆ
ಕ್ಲಿಷ್ಟವೀ ಬ್ರಹ್ಮಕೃತಿ - ಮಂಕುತಿಮ್ಮ
ಈ ಬೃಹತ್ ಬ್ರಹ್ಮಾಂಡದ ಸೃಷ್ಟಿಯ ಆಶಯಗಳೇ ತಿಳಿಯಗೊಡುವುದಿಲ್ಲ. ಸ್ಪಷ್ಟತೆ ತಿಳಿಯುವುದೇ ಕಷ್ಟ. ಮನಕೆ ಉಲ್ಲಾಸ, ಸಂತೋಷ ಇಷ್ಟಗಳನ್ನು ನೀಡುವ ಮನಮೋಹಕವಾದ ದಿವ್ಯಗುಣಗಳು ಒಂದೆಡೆ, ಮತ್ತೊಂದು ಕಡೆ ಅಷ್ಟ ಕಷ್ಟಗಳ ಸರಮಾಲೆ, ಬೀಭಿತ್ಸ ಭಯಾನಕ ಅಸಹ್ಯಗಳ ಹಾಗು ಕಷ್ಟ ನಷ್ಟಗಳ ಸರಮಾಲೆ... ಅಬ್ಬಾ........ ಈ ಬ್ರಹ್ಮಸೃಷ್ಟಿ ಬಲು ಕಷ್ಟಕರವಾದುದಾಗಿದೆ. ನನ್ನ ನೆಚ್ಚಿನ ತಿಮ್ಮ ತಿಮ್ಮಯರಿಗೆ ಮನಕೆ ಮೋಹ-ಪ್ರೇಮ ತುಂಬಿದ ಸಿಹಿದಿನಗಳು ಹೆಚ್ಚಾಗಿರಲೆಂದು ಆಶಿಸುತಾ ಈ ರವಿಯು ನಿಮಗೆ ಶುಭದಿನದ ಜೊತೆ ಶುಭೋದಯ ಎನ್ನುತಾ ಕಾಯಕದೆಡೆಗೆ ರೈಟ್ ರೈಟ್ ಟ್ ಟ್ ಟ್ ಟ್

ಕೋಡುಗಲ್ಲನು ಹತ್ತಿ ದುರವನು ನೋಳ್ಪಂಗೆ
ಗೋಡೆಗುತ್ತುಗಳೇನು? ಮೇಡು ಕುಳಿಯೇನು?
ನೋಡು ನೀನುನ್ನತದಿ ನಿಂತು ಜನಜೀವಿತವ
ಮಾಡುದಾರದ ಮನವ - ಮಂಕುತಿಮ್ಮ
ಬೆಟ್ಟವನ್ನು ಹತ್ತಿ ಅದರ ತುತ್ತತುದಿಯಿಂದ ಎಷ್ಟು ದೂರಕೆ ಕಣ್ಣು ಹಾಯಿಸಿದರೂ ಅಡೆ ತಡೆ ಕಾಣಬಲ್ಲದೆ? ಹಾಗೆಯೇ ಹಳ್ಳ ದಿಣ್ಣೆಗಳು ಸಹ ಕಾಣದು ಅಲ್ಲವೆ? ಅಂತೆಯೇ ನನ್ನ ಮೆಚ್ಚಿನ ಸ್ನೇಹಿತರಾದ ನೀವು ಕೂಡ ಖಡ್ಡಾಯವಾಗಿ ಅತಿ ಎತ್ತರದಲ್ಲಿ ನಿಂತು ಜೀವನನ್ನು ನೋಡುತ್ತಲಿರಬೇಕು. ಅದಕ್ಕೆ ಮುಂಚೆ ನಿಮ್ಮ ಮನವು ಉದಾರವಾಗಿರಲೆಂದು ನನ್ನ ಹಾರೈಕೆ. ಇಷ್ಟೆಲ್ಲ ಗುಣಸಂಪನ್ನವಿರುವ ನಿಮ್ಮನ್ನು ಪಡೆದ ನಾನೇ ಧನ್ಯನಲ್ಲವೆ? ಸ್ನೇಹಿತರೆ ನಿಮಗೆ ಪ್ರೀತಿಯ ಶುಭದಿನ ಶುಭೋದಯ

ವ್ಯಾಮೋಹವಿರದ ಪ್ರೇಮ ನಿರ್ಭರವಿರಲಿ
ಭೀಮಸಾಹಸವಿರಲಿ ಹಗೆತನವನ್ನುಳಿದು
ನೇಮನಿಷ್ಟೆಗಳಿರಲಿ ಢಂಭಕಠಿನತೆಬಿಟ್ಟು
ಸೌಮ್ಯವೆಲ್ಲೆಡೆಯಿರಲಿ - ಮಂಕುತಿಮ್ಮ
ನೀವು ಸೂಸುವ ಪ್ರೇಮವು ಅತಿಯಾದ ವ್ಯಾಮೋಹವಿರದೆ ಸರಳವಾಗಿರಲಿ. ನಿಮ್ಮ ಬದುಕಿನಲ್ಲಿ ಅಪರಮಿತ ಸಾಹಸವೃತ್ತಿ ಇರಲಿ. ಆದರೆ ಅಲ್ಲಿ ವೈರತನ ಇಲ್ಲದಿರಲಿ. ಅದರ ಜೊತೆಜೊತೆಯಲ್ಲಿಯೇ ಅತಿ ಒರಟುತನ ಮತ್ತು ನಿಯಮ ನಿಷ್ಟೆಗಳಿರಲಿ... ಈ ಎಲ್ಲ ಸದ್ಗುಣಗಳ ಜೊತೆ ಸೌಮ್ಯತಾಭಾವ ಎಲ್ಲೆಲ್ಲೂ ಇರಲಿ... ಇಂಥಹ ಸ್ನೇಹಿತರನ್ನು ಪಡೆದ ನಾನೇ ಧನ್ಯ... ಪ್ರೇಮಪೂರ್ವಕವಾಗಿ ನಿಮ್ಮ ಈ ಸ್ನೇಹಿತನಾದ ರವಿಯು ನಿಮಗೆ ಹೇಳೊದು ಶುಭದಿನ ಶುಭೋದಯ

ಅಳುವೇನು? ನಗುವೇನು? ಹೃತ್ಕಪಾಟೋದ್ಚಾಟ
ಶಿಲೆಯೆ ನೀಂ ಕರಗದಿರಲ್? ಅರಲದಿರೆ ಮರಳೇಂ
ಒಳಜಗವ ಹೊರವಡಿಪ, ಹೊರಜಗವನೊಳಕೊಳುವ
ಸುಳುದಾರಿಯಳುನಗುವು - ಮಂಕುತಿಮ್ಮ
ಮಾನವ ನಗುತ್ತಿದ್ದರೂ ಸರಿಯೇ, ಅಳುತ್ತಿದ್ದರೂ ಸರಿ.. ಅದು ಅವನ ಹೃದಯದ ಬಾಗಿಲ ಕದವು ತೆರೆಯುವುದು. ಕೂಗಿಗೆ ಕರಗುತ್ತಾನೆ ಅಲ್ಲವೆ? ಆ ಹೃದಯದ ಕೂಗಿಗೆ ಕರಗಲೇಬೇಕು ಇಲ್ಲದಿದ್ದರೆ ಅವನೇನು ಕಲ್ಲೇ? ಅಥವ ಅರಳದೆ ಇರಲು ಮರಳೇ? ಒಟ್ಟಿನಲ್ಲಿ ಈ ಅಳು-ನಗುಗಳಾಂತರಗದಲ್ಲಿರುವುದನ್ನು ಬಹಿರಂಗಕ್ಕೆ ಅಂತೆಯೇ ಬಹಿರಂಗದಲ್ಲಿರುವುದನ್ನು ಅಂತರಂಗಕ್ಕೆ ಕೊಂಡೊಯ್ಯುವ ಸುಲಬ ಮಾರ್ಗವೇ ಅಗಿದೆಯಲ್ಲ ನನ್ನ ಜಾಣ ಜಾಣೆಯರೆ? ಎಂದಿನಂತೆ ನಿಮಗೆ ಪ್ರೀತಿಯ ಶುಬದಿನ ಶುಭೋದಯ

ಕಾಯಕಿಂತಾತ್ಮ ಪಿರಿದೆಂದು ಜನವರಿತಂದು

ಕಾಯಕಿಂತಾತ್ಮ ಪಿರಿದೆಂದು ಜನವರಿತಂದು
ಸ್ವೀಯೇಚ್ಚೆಯಿಂ ಸಮಾಧಾನ ಕೆಡದಂದು
ದಾಯ ಸಮ ಸಂಸೃಷ್ಟಿ ಭೂಭಾಗ್ಯವಾದಂದು
ಶ್ರೇಯ ನೆರವುದು ಜಗಕೆ - ಮಂಕುತಿಮ್ಮ

ಜಗದ ತಪ್ಪು ಒಪ್ಪುಗಳನ್ನು ತಿದ್ದುವುದಕ್ಕಿಂತ ಮುಂಚೆ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುವುದು ಉತ್ತಮ. ಜಗದಲ್ಲಿ ಶುಖ-ಶಾಂತಿ ಲಭಿಸಬೇಕಾದರೆ ಮೊದಲು ಮಾನವ ದೇಹಕ್ಕಿಂತ ಆತ್ಮವೇ ದೊಡ್ಡದೆಂದು ಆತ್ಮಸಾಕ್ಷಿಗೆ ವಿರುದ್ದ ನಡೆಯದಂತೆ ಜೀವಿಸಲು ಕಲಿತಾಗ, ತನ್ನ ಆಸೆಯಿಂದ ಜಗತ್ತಿನ ಶಾಂತಿ-ಸಮಾಧಾನ ಕದಡದು ಎಂದು ಅರಿತಾಗ, ತಾನು ಗಳಿಸಿದ ಆದಾಯದದಲ್ಲಿ ಸಮಪಾಲು ರಾಜ್ಯ-ರಾಷ್ಟ್ರಗಳಿಗೆ ಲಭಿಸಿದಾಗ ರಾಷ್ಟ್ರವಲ್ಲದೆ ಇಡೀ ಜಗತ್ತಿಗೆ ಶ್ರೇಯಸ್ಸುಂಟಾಗಿ ಸುಭಿಕ್ಷೆಯಾಗಿರುತ್ತದೆಯಲ್ಲವೆ?

ಪ್ರೀತಿಯಿಂದ ಶುಭದಿನ ಶುಭೋದಯ
ಭಿತ್ತಿಯೊಂದಿಲ್ಲದಿದ್ದರೆ ಚಿತ್ರವೆಂತಿರಲಹುದು?
ಚಿತ್ರವಿಲ್ಲದ ಭಿತ್ತಿ ಸೊಗಸಹುದದೆಂತು?
ನಿತ್ಯಸತ್ತ್ವವೆ ಭಿತ್ತಿ ಜೀವಿತ ಕ್ಷಣಚಿತ್ರ
ತತ್ತ್ವವೀ ಸಂಬಂಧ - ಮಂಕುತಿಮ್ಮ

ಭಿತ್ತಿಚಿತ್ರ ಎಂಬುದೊಂದು ಚಿತ್ರಕಲೆಯ ಪ್ರಕಾರದಂತೆ.... ಗೋಡೆಯಿಲ್ಲದೆ ಚಿತ್ರ ರಚಿಸಲು ಸಾಧ್ಯವೆ? ಹಾಗೆಯೇ ಚಿತ್ರವಿಲ್ಲದ ಗೋಡೆ ಅಂದವಾಗಿರಲು ಹೆಂಗೆ ಸಾಧ್ಯ? ನೋಡಿ ನಮ್ಮ ಉದ್ಯಾನನಗರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಗೋಡೆಗಳ ಮೇಲೆ ಕನ್ನಡನಾಡಿನ ಪ್ರಸಿದ್ದ ಚಿತ್ರಕಲೆಯನ್ನು ಪರಿಚಯ ಮಾಡಿಕೊಡುತ್ತಿದೆ ನೋಡಿ.. ಸಿನಿಮಾಭಿತ್ತಿ ಪತ್ರದ ಹಾವಳಿಯಿಲ್ಲ, ಪಾನ್ ಜಗಿದು ವಿಕೃತಿಗೊಳಿಸುವವರ ಹಾವಳಿಯಂತೂ ಇಲ್ಲವೇ ಇಲ್ಲ... ನೋಡುವುದಿಕ್ಕೆ ಎಷ್ಟು ಅಂದವಾಗಿದೆ.... ಎಕೆಂದರೆ ಗೋಡೆ ನಿತ್ಯ ಸತ್ಯದಂತೆ, ಚಿತ್ರ ಜೀವಿತದ ಕ್ಷಣದಂತೆ.... ಈ ತತ್ವವೇ ಭಿತ್ತಿ-ಚಿತ್ರಗಳ ಸಂಬಂಧ ಅಲ್ಲವೆ?? ಸ್ನೇಹಿತರೆ ಪ್ರೀತಿಯಿಂದ ನಿಮಗೆ ಶುಭದಿನ ಶುಭೋದಯ

ಕೊಲೆಗಡಿಕನೆನಿಪ ಹುಲಿ ಸಲಹದೇಂ ಮರಿಗಳನು?
ಒಲುಮೆಕರುಳಡಗಿಹುದು ಪಗೆತನದ ಪೊಡೆಯೊಳ್
ನಲುಮೆಯನು ಹೊರಹೊಮ್ಮಿಸುವುದು ನರನುನ್ನತಿಕೆ
ಒಲವಾತ್ಮವಿಸ್ತಣಂ - ಮಂಕುತಿಮ್ಮ

ಕ್ರೂರಮೃಗವೆನಿಸಿ, ನರಭಕ್ಷಕ ಹುಲಿಯೆಂದು ಕರೆಸಿಕೊಳ್ಳುವ ಹುಲಿಯು ತನ್ನ ಮರಿಗಳನ್ನು ವಾತ್ಸಲ್ಯದಿಂದ ಸಲಹಿ ಸಾಕುವುದಿಲ್ಲವೆ? ಅಂತೆಯೇ ಆ ಹಗೆತನ ಎಂಬ ಗುಹೆಯಲ್ಲಿ ಪ್ರೇಮದ ಕರುಳು ಸಹ ಅಡಗಿರುತ್ತದೆಯಲ್ಲವೆ? ಹಾಗಾದರೆ ಪ್ರಾಣಿಗಳಲ್ಲಿ ಶ್ರೇಷ್ಟವಾದ ಮನುಷ್ಯ ಪ್ರಾಣಿಯು ಮಾಡಬೇಕಾದ ಮೊದಲ ಕೆಲಸ... ಒಲುಮೆಯನ್ನು ಹೊರಹೊಮ್ಮಿಸಿ, ಆ ಒಲುಮೆಯಿಂದ ಅತ್ಮವಿಸ್ತಾರವಾಗುವಂತೆ ನೊಡಿಕೊಳ್ಳುವುದು ಮಾನವನ ಹೆಗ್ಗಳಿಕೆಯೆಂದೇ ನಾನು ಭಾವಿಸುವೆ. ದ್ವೇಷ ಅಸೂಯೆಗಿಂತ ಪರಮೋಚ್ಚ ಶಕ್ತಿಯಿರುವುದು ಆ ಒಲುಮೆಗೆ ಮಾತ್ರವೆ.... ಅಲ್ಲವೆ ನನ್ನೊಲವಿನ ಸ್ನೇಹಿತರೆ ..... ಅದೇ ಒಲುಮೆಯಿಂದ ನನ್ನ ನೆಚ್ಚಿನ ಸ್ನೇಹಿತ/ಸ್ನೇಹಿತೆಯರಿಗೆ ಒಲವಿನಿಂದ ಶುಭದಿನ ಶುಭೋದಯ

ಅಡಿಜಾರಿ ಬೀಳುವುದು, ತಡವಿಕೊಂಡೇಳುವುದು
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು
ದುಡುಕಿ ಮತಿದಪ್ಪುವುದು, ತಪ್ಪನೊಪ್ಪನ್ನುವುದು
ಬದುಕೆಂಬುದಿದು ತಾನೆ? - ಮಂಕುತಿಮ್ಮ

ಹೆಜ್ಜೆಯನ್ನು ತಪ್ಪಿ ಜಾರಿಬಿದ್ದುಬಿಡುವುದು, ನಂತರ ತಡವಿಕೊಂಡು ಮೇಲೆಳುವುದು, ಮಿತಿಮೀರಿ ಉಣ್ಣುವುದು, ನಂತರ ಅರೋಗ್ಯ ಹದೆಗೆಟ್ಟಾಗ ಔಷದಿ ಸೇವಿಸುವುದು. ಸ್ನೇಹಿತರೊಂದಿಗೋ ಕಚೇರಿಯಲ್ಲಿಯೋ ಇಲ್ಲವೆ ವ್ಯವಹರಿಸುವಾಗಲೋ ತಾಳ್ಮೆಗೆಟ್ಟು, ದುಡುಕಿ ಬುದ್ದಿಕೆಟ್ಟು ವರ್ತಿಸುವುದು, ನಂತರ ನಮ್ಮ ತಪ್ಪು ತಿದ್ದುಕೊಳ್ಳುವುದು ಸಹಜವಲ್ಲವೆ ನನ್ನ ಮೆಚ್ಚಿನ ತಿಮ್ಮತಿಮ್ಮಯರೆ? ಯಾಕೆಂದರೆ ಇವೇ ನಮ್ಮ ಇಷ್ಟು ವರ್ಷದ ಬದುಕೆಂಬ ಬಾಳದೋಣಿಯಲ್ಲಿ ಕಂಡುಬಂದ, ಕಂಡಂತಹ ನಗ್ನಸತ್ಯವಲ್ಲವೆ? ಎಂದಿನಂತೆ ನಿಮ್ಮ ಸ್ನೇಹಿತನಾದ ರವಿಯ ಶುಭದಿನ ಶುಭೋದಯ

Monday, September 6, 2010

ತರಚುಗಾಯವ ಕೆರೆದು ಹುಣ್ಣಾಗಿಸುವುದು ಕಪಿ

ತರಚುಗಾಯವ ಕೆರೆದು ಹುಣ್ಣಾಗಿಸುವುದು ಕಪಿ
ಕೊರತೆಯೊಂದನು ನೀನು ನೆನೆನನೆದು ಕೆರಳೆ
ಧರೆಯೆಲ್ಲವನು ಶಪಿಸಿ, ಮನದ ನರಕವ ನಿಲಿಸಿ
ನರಳುವುದು ಬದುಕೆನೋ? - ಮಂಕುತಿಮ್ಮ.


ಆಗಿರುವ ತರಚುಗಾಯವನ್ನೇ ಕಪಿಯು ಕೆರೆದು ಕೆರೆದು ದೊಡ್ಡ ಹುಣ್ಣಾಗುವಂತೆ ಮಾಡುತ್ತದೆ. ಅದರಂತೆ ನಮ್ಮ ಜೀವನದಲ್ಲಿ ಅಕಸ್ಮಿಕವಾಗಿಯೋ ಇಲ್ಲವೆ ವಿಧಿಯಲೀಲೆಯಿಂದಲೋ ಉಂಟಾಗುವ ಕೊರತೆಯೊಂದನ್ನು ನೆನೆದು, ಕೆರಳಿ ಜನರನ್ನೆಲ್ಲ ಶಪಿಸಿ, ಮನಸ್ಸನ್ನು ಮಾನವ ನರಕವಾಗಿಸುವನೆ? ಹೀಗೆ ನರಳಿನರಳಿ ಬಾಳುವ ಬಾಳು ಬಾಳೇನು ನನ್ನ ತಿಮ್ಮ ತಿಮ್ಮಿಯರೆ? ಅಲ್ಲ ಖಂಡಿತ ಅಲ್ಲ. ದೈವದ ಸಂಕಲ್ಪವಿಲ್ಲದೆ ಜಗತ್ತಿನ ಒಂದು ಹುಲ್ಲುಕಡ್ಡಿಯು ಅಲುಗಾಡಲಾಗುವುದಿಲ್ಲ ಅಲ್ಲವೆ? ಭಗವಂತನ ದಯೆ ಇರಲೆಂದು ಕೋರುತ್ತಾ ಪ್ರೀತಿಯಿಂದ ಶುಭದಿನ ಶುಭೋದಯ

ಕ್ಷಣವೊಂದರೊಳೆ ಪೂರ್ತಿ

ಕ್ಷಣವೊಂದರೊಳೆ ಪೂರ್ತಿ ಕೊಲ್ಲುವುದು ಯಮಶೂಲ
ಕ್ಷಣವನುಕ್ಷಣ ಕೊಲ್ಲುವುವು ಮೋಹಮಮತೆ
ಕುಣಿಕೆಯನ್ನು ನಿನ್ನ ಕೊರಳಿಗೆ ಹೂಡಿ ಚಿರಕಾಲ
ವಣುವಣುವೆ ಬಿಗಿಯುವುವೊ - ಮಂಕುತಿಮ್ಮ

ಸ್ನೇಹಿತರೆ ಆ ಯಮಪಾಶವು ನಮ್ಮನ್ನು ಒಂದೇ ಕ್ಷಣದಲ್ಲಿ ನಮ್ಮೀ ಜೀವಾತ್ಮಕ್ಕೆ ಮುಕ್ತಿ ಕೊಟ್ಟುಬಿಡುತ್ತದೆ. ಆದರೆ ಮೋಹ ಮಮತೆಯೆಂಬ ಪಾಶ????? ಈ ಮೋಹ ಪಾಶ ನಮ್ಮನ್ನು ಅಣುಅಣುವಾಗಿ ಕೊಲ್ಲುತ್ತಲೇ ಇರುತ್ತದೆ ನೋಡಿ. ನಾವು ಎಷ್ಟು ಬೇಡ ಬೇಡವೆಂದರೂ ಅದರ ಕುಣಿಕೆಗೆ ನಮಗೆ ಅರಿವಿಲ್ಲದಂತೆ ಸಿಕ್ಕುಬಿಟ್ಟಿರುತ್ತೇವೆ. ನಮ್ಮೀ ದೇಹದಲ್ಲಿ "ಜೀವಾತ್ಮ" ಇರುವವರೆಗೂ ಮೋಹ ಪಾಶದಲ್ಲಿ ಸಿಕ್ಕು ಕ್ಷಣಕ್ಷಣಕ್ಕೂ ಅದರ ಹಿಡಿತದಿಂದ ನರಳಾಡುತ್ತಲೇ ಇರುತ್ತೇವಲ್ಲವೆ? ಅಂತಹ ಮೋಹಪಾಶದ ಹಿಡಿತದಿಂದ ನಮ್ಮ ತಿಮ್ಮ/ತಿಮ್ಮಿಯರಿಗೆ ಶೇಕಡಾ ತೊಂಬತ್ತರಷ್ಟು ಆನಂದ, ಸಂತೋಷ ಲಭಿಸಲೆಂದು ಆಶಿಸುತ್ತಾ, ಎಂದಿನಂತೆ ನಿಮ್ಮ ಸ್ನೇಹಿತನ ರವಿಯ ಶುಭನುಡಿ - ಶುಭದಿನ ಶುಭೋದಯ

Thursday, September 2, 2010

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ

ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ |
ಯಕ್ಷಿಯರು ಮ್ಯಾಕ್‌ಬೆತನಿಗೆಸಗಿದುಪದೇಶ ||
ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? |
ಅಕ್ಷಿ ನಿರ್ಮಲವೇನೊ ? - ಮಂಕುತಿಮ್ಮ ||

ನಮ್ಮೀ ಮನಕೆ ಆಸೆಗಳನ್ನು ಉಂಟುಮಾಡುವ ಬಂಧು - ಮಿತ್ರರ ಉಪಕಾರವು ಎಷ್ಟೆಂದರೆ.... ಮಾಟಗಾತಿ ಮ್ಯಾಕ್‌ಬೆತ್‌ನಿಗೆ ಮಾಡಿದ ಉಪಕಾರವಿದ್ದಂತೆ ಎಂದರೆ ತಪ್ಪಾಗಲಾರದು. ಇತ್ತ ನಿರ್ಮಲ ಪ್ರೀತಿ- ವಾತ್ಸಲ್ಯವೂ ಇಲ್ಲದೆ ಅತ್ತ ಕೋಪ-ತಾಪವೂ ಇಲ್ಲದೆ ಸಂಶಯದ ನೋಟದಲೇ ಜೀವನ ಪರ್ಯಂತ ಕಳೆದುಬಿಡುತ್ತೇವೋ ಏನೋ... ಒಟ್ಟಿನಲ್ಲಿ ಕಣ್ಣನೋಟ ನಿರ್ಮಲವಿರಬೇಕಷ್ಟೆ.... ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ ಶುಭೋದಯ.. ತಾಯಿ ಮಹಾಲಕ್ಷಿಯ ಕೃಪಕಟಾಕ್ಷ ಲಭಿಸಲಿ.. ಲಭಿಸಿದ ಮೇಲೆ ಈ ಬಡಪಾಯಿಯ ನೆನಪೂ ಇರಲೆಂದು ಹಾರೈಸುತ್ತಾ ರೈಟ್ ಹೇಳ್ತಾ ಇದ್ದೀನಿ

ಮೂರಿರಲಿವಾದ

ಮೂರಿರಲಿವಾದ, ಮುನ್ನೂರಿರಲಿ : ಸಕಲರುಂ |
ಸಾರವಸ್ತುವನೊಂದನೊಪ್ಪಿಕೊಳುವರೇ ||
ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |
ಭಾರವಾಗದು ಜಗಕೆ - ಮಂಕುತಿಮ್ಮ ||

ನಾಸ್ತಿಕನಾಗಲಿ ಇಲ್ಲವೇ ಅಸ್ತಿಕನಾಗಲಿ, ವಾದ - ವಾಗ್ವಾದಗಳು ಮೂರಿರಲಿ ಯಾ ಮುನ್ನೂರಿರಲಿ, ಎಲ್ಲರೂ ಭಗವಂತನ ಇರುವಿಕೆಯನ್ನು ಒಪ್ಪಿಕೊಂಡಿದ್ದಾರೆ. ಈ ಜಗದಲಿ ಏನೇ ಆಗಲಿ, ಅದು ನಮ್ಮ ಎಣಿಕೆಯಂತೆ ಆಗದಿರಬಹುದು. ಎಲ್ಲವೂ ಆತನ ಸಂಕಲ್ಪದಂತೆಯೇ ಜರುಗುತ್ತದೆ. ಅಂದಮೇಲೆ ವೃಥಾ ಕೊರಗದೆ, ಇನ್ನೊಬ್ಬರಿಗೆ ಕೆಡುಕುಂಟು ಮಾಡದೆ, ನಾಲ್ಕು ಜನರಿಗೆ ಉಪಕಾರವಾಗುವ ರೀತಿಯಲ್ಲಿ ಅ ಜೀವನ ಸವೆಸಿಬಿಟ್ಟರೆ ಅತನ ಅನುಗ್ರಹ ಸದಾ ಕಾಲ ನಮ್ಮ ಮೇಲಿರುವುದಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನದ ಜೊತೆಗೆ ವಿಶೇಷವಾಗಿ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

ಅಂಬುದಿಯ ಮಡಕೆಯಲಿ

ಅಂಬುದಿಯ ಮಡಕೆಯಲಿ, ಹೊಂಬಿಸಿಲ ಕಿಟಕಿಯಲಿ |
ತುಂಬಿಕೊಳ್ಳುವ ಬಡವನೈಶ್ವರ್ಯದಂತೆ ||
ಬೆಂಬದೊಳಗಿಮಿತ ಸತ್ತ್ವವ ಪಿಡೀಬಿಡುವ ಭಕ್ತಿ - |
ಯಿಂಬು ಕಿಂಚನ್ಮತಿಗೆ - ಮಂಕುತಿಮ್ಮ ||

ಮಡಕೆಯಲ್ಲಿ ಸಮುದ್ರದ ನೀರನ್ನೆಲ್ಲಾ ತುಂಬಿಕೊಳ್ಳಲು ಸಾಧ್ಯವೆ? ಅಂತೆಯೇ ನಿಮ್ಮ ಮನೆಯಂಗಳದ ಕಿಟಕಿಯ ಮುಖಾಂತರ ತೂರಿ ಬಂದ ಹೊಂಬಿಸಿಲನ್ನು ತುಂಬಿಕೊಳ್ಳಲು ಸಾಧ್ಯವೆ? ಇಡೀ ಸಂಪತ್ತಿಗೆಲ್ಲಾ ಬಡವನೊಬ್ಬನು ಒಡೆಯನಾಗುವನೇ ತಿಮ್ಮ ತಿಮ್ಮಿಯರೆ?ಭಕ್ತನಾದವನು ಬಿಂಬದಲ್ಲಿ ಅನಂತ ಸತ್ತ್ವವನು ಕಾಣುವನು. ಯಾವುದೇ ಕ್ಷೇತ್ರವಾಗಲಿ ನಾವು ನಾವು ಮಾಡುವ ಕೆಲಸಗಳ ಮೇಲೇ ಭಯ ಭಕ್ತಿ ಇದ್ದರೆ ಮಾತ್ರ ನೆರವಾಗಬಲ್ಲದೆಂದು ಈ ಕಗ್ಗದಲ್ಲಿ ತಿಳಿದುಬರುತ್ತದೆಯಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನ