Monday, September 6, 2010

ತರಚುಗಾಯವ ಕೆರೆದು ಹುಣ್ಣಾಗಿಸುವುದು ಕಪಿ

ತರಚುಗಾಯವ ಕೆರೆದು ಹುಣ್ಣಾಗಿಸುವುದು ಕಪಿ
ಕೊರತೆಯೊಂದನು ನೀನು ನೆನೆನನೆದು ಕೆರಳೆ
ಧರೆಯೆಲ್ಲವನು ಶಪಿಸಿ, ಮನದ ನರಕವ ನಿಲಿಸಿ
ನರಳುವುದು ಬದುಕೆನೋ? - ಮಂಕುತಿಮ್ಮ.


ಆಗಿರುವ ತರಚುಗಾಯವನ್ನೇ ಕಪಿಯು ಕೆರೆದು ಕೆರೆದು ದೊಡ್ಡ ಹುಣ್ಣಾಗುವಂತೆ ಮಾಡುತ್ತದೆ. ಅದರಂತೆ ನಮ್ಮ ಜೀವನದಲ್ಲಿ ಅಕಸ್ಮಿಕವಾಗಿಯೋ ಇಲ್ಲವೆ ವಿಧಿಯಲೀಲೆಯಿಂದಲೋ ಉಂಟಾಗುವ ಕೊರತೆಯೊಂದನ್ನು ನೆನೆದು, ಕೆರಳಿ ಜನರನ್ನೆಲ್ಲ ಶಪಿಸಿ, ಮನಸ್ಸನ್ನು ಮಾನವ ನರಕವಾಗಿಸುವನೆ? ಹೀಗೆ ನರಳಿನರಳಿ ಬಾಳುವ ಬಾಳು ಬಾಳೇನು ನನ್ನ ತಿಮ್ಮ ತಿಮ್ಮಿಯರೆ? ಅಲ್ಲ ಖಂಡಿತ ಅಲ್ಲ. ದೈವದ ಸಂಕಲ್ಪವಿಲ್ಲದೆ ಜಗತ್ತಿನ ಒಂದು ಹುಲ್ಲುಕಡ್ಡಿಯು ಅಲುಗಾಡಲಾಗುವುದಿಲ್ಲ ಅಲ್ಲವೆ? ಭಗವಂತನ ದಯೆ ಇರಲೆಂದು ಕೋರುತ್ತಾ ಪ್ರೀತಿಯಿಂದ ಶುಭದಿನ ಶುಭೋದಯ

No comments:

Post a Comment