Thursday, September 2, 2010

ಮೂರಿರಲಿವಾದ

ಮೂರಿರಲಿವಾದ, ಮುನ್ನೂರಿರಲಿ : ಸಕಲರುಂ |
ಸಾರವಸ್ತುವನೊಂದನೊಪ್ಪಿಕೊಳುವರೇ ||
ಪಾರಮಾರ್ಥಿಕವನಂತೆಣಿಸಿದ ವ್ಯವಹಾರ |
ಭಾರವಾಗದು ಜಗಕೆ - ಮಂಕುತಿಮ್ಮ ||

ನಾಸ್ತಿಕನಾಗಲಿ ಇಲ್ಲವೇ ಅಸ್ತಿಕನಾಗಲಿ, ವಾದ - ವಾಗ್ವಾದಗಳು ಮೂರಿರಲಿ ಯಾ ಮುನ್ನೂರಿರಲಿ, ಎಲ್ಲರೂ ಭಗವಂತನ ಇರುವಿಕೆಯನ್ನು ಒಪ್ಪಿಕೊಂಡಿದ್ದಾರೆ. ಈ ಜಗದಲಿ ಏನೇ ಆಗಲಿ, ಅದು ನಮ್ಮ ಎಣಿಕೆಯಂತೆ ಆಗದಿರಬಹುದು. ಎಲ್ಲವೂ ಆತನ ಸಂಕಲ್ಪದಂತೆಯೇ ಜರುಗುತ್ತದೆ. ಅಂದಮೇಲೆ ವೃಥಾ ಕೊರಗದೆ, ಇನ್ನೊಬ್ಬರಿಗೆ ಕೆಡುಕುಂಟು ಮಾಡದೆ, ನಾಲ್ಕು ಜನರಿಗೆ ಉಪಕಾರವಾಗುವ ರೀತಿಯಲ್ಲಿ ಅ ಜೀವನ ಸವೆಸಿಬಿಟ್ಟರೆ ಅತನ ಅನುಗ್ರಹ ಸದಾ ಕಾಲ ನಮ್ಮ ಮೇಲಿರುವುದಲ್ಲವೆ? ಸ್ನೇಹಿತರೆ ಎಂದಿನಂತೆ ನಿಮಗೆ ಶುಭದಿನದ ಜೊತೆಗೆ ವಿಶೇಷವಾಗಿ ಶ್ರೀಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು

No comments:

Post a Comment